Babaleshwar Tiranga: ಬಬಲೇಶ್ವರದಲ್ಲಿ ತಿರಂಗಾ ಯಾತ್ರೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ ಚಾಲನೆ

ವಿಜಯಪುರ: ಬಬಲೇಶ್ವರ ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. 300 ಮೀ. ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಗೆ ವಿಧಾನ ಪರಿಷತ ಕಾಂಗ್ರೆಸ್ ಶಾಸಕ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಿರಾರು ಜನರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟದಟ ಮಾರ್ಗದಲ್ಲಿ ನಡೆದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ತಿರಂಗಾ ಯಾತ್ರೆ ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್ ನಿಂದ ಆರಂಭವಾದ […]

Raksha Bandhan: ಪತ್ರಕರ್ತರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಸಹೋದರಿಯರು

ವಿಜಯಪುರ: ಒಡಹುಟ್ಟಿದವರು ಮಾತ್ರ ಸಹೋದರರು ಅಲ್ಲ. ರಕ್ಷಣೆ ಕೊಡುವವರೂ ಎಲ್ಲರೂ ಸಹೋದರ ಬಾಂಧವರೇ ಎಂದು ಬಿ. ಕೆ. ಸರೋಜಿನಿ ಹೇಳಿದರು. ವಿಜಯಪುರ ನಗರದ ಹುತಾತ್ಮ ವೃತ್ತದಲ್ಲಿ ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಪತ್ರಕರ್ತರಿಗೆ ಆಯೋಜಿಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ರಾಖಿ ಕಟ್ಟಿ ಅವರು ಮಾತನಾಡಿದರು. ಮಾತು ಎಲ್ಲರ ಜೀವನ ಪರಿವರ್ತನೆ ಮಾಡುವಂತಿರಬೇಕು. ಸಮಯದ ಜಾಗೃತೆ ಇರಬೇಕು. ಸಮಯ ಹೋದರೆ ಮರಳಿ ಬರುವುದಿಲ್ಲ. ಪಂಚಭೂತವಾದ ಕೆಟ್ಟಗುಣಗಳನ್ನು ದಾನವಾಗಿ ಭಗವಂತನಿಗೆ ಕೊಡಬೇಕು. ರಕ್ಷಾ ಬಂಧನ ಕೇವಲ […]