Basavana Bagewadi Tiranga: ಬಸವಣ್ಣನ ಜನ್ಮಸ್ಥಳದಲ್ಲಿ ತಲೆಯ ಮೇಲೆ ರೊಟ್ಟಿ ಬುತ್ತಿ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಚರಿಸಿ ಜಾತ್ರೆಗೆ ಮೆರಗು ನೀಡಿದ ಮಹಿಳೆಯರು

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.  ಇತ್ತ ಇದೇ ಸಮಯದಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಅಣ್ಣ ಬಸವಣ್ಣನ ಜಾತ್ರೆಯೂ ಕೂಡ ಆರಂಭವಾಗಿದೆ. ಈ ಜಾತ್ರೆಗೆ ಬಸವನ ಬಾಗೇವಾಡಿ ಪಟ್ಟಣದ ಯುವತಿಯರು ಮತ್ತು ಮಹಿಳೆಯರು ಜಾತ್ರೆಯ ದಾಸೋಹಕ್ಕೆ ನೆರವಾಗಲು ತಂತಮ್ಮ ಮನೆಗಳಲ್ಲಿ ರೊಟ್ಟಿಯನ್ನು ಮಾಡಿ ಜಾತ್ರಾ ಸಮಿತಿಯವರಿಗೆ ನೀಡುತ್ತಿದ್ದಾರೆ.  ಈ ಸಮಯದಲ್ಲಿಯೂ ದೇಶಪ್ರೇಮ ಮೆರೆದ ಮಹಿಳೆಯರು ಬಸವನ ಬಾಗೇವಾಡಿ ಪಟ್ಟಣಾದ್ಯಂತ ತಲೆಯ ಮೇಲೆ ರೊಟ್ಟಿಯ ಬುತ್ತಿ ಹೊತ್ತುಕೊಂಡು ಕೈಯಲ್ಲಿ […]

Tiranga Umesh Karajol: ಕನ್ನೂರಿನಲ್ಲಿ ಗ್ರಾಮಸ್ಥರೊಂದಿಗೆ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ

ವಿಜಯಪುರ: ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ನಡೆದ ಹರ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ ಪಾಲ್ಗೋಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಅವರು, ಕನ್ನೂರಿನಲ್ಲಿ ಕಲ್ಲಪ್ಪ ಬೆಳ್ಳುಂಡಗಿ ಅವರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡರು. ಬಳಿಕ ಮಾತನಾಡಿದ ಅವರು, ರಾಷ್ಟ್ರಧ್ವಜ ನಮ್ಮ ದೇಶಾಭಿಮಾನದ ಪ್ರತೀಕ,  ನಮ್ಮ ದೇಶದ ಗೌರವದ ಸಂಕೇತ.  ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ […]

Har Ghar Tiranga: ಮನೆ ಮನಗಳಲ್ಲಿ ರಾರಾಜಿಸುತ್ತಿವೆ ತ್ರಿವರ್ಣ ಧ್ವಜಗಳು- ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಬಲು ಜೋರು

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಮೂರು ದಿನಗಳ ಕಾಲ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ.  ಅಲ್ಲದೇ, ಈ ಅಮೃತ ಮಹೋತ್ಸವ ಸದಾಕಾಲ ನೆನಪಿನಲ್ಲಿ ಉಳಿಯುವಂತಾಗಲು ನಾನಾ ಕಾರ್ಯಕ್ರಮಗಳನ್ನೂ ಆಯೋಜಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಮನೆಮನೆಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.  ವಿಜಯಪುರ ನಗರದಲ್ಲಿಯೂ ಎಲ್ಲ ಕಡೆಗಳಲ್ಲಿ ಸಾರ್ವಜನಿಕರೂ ಕೂಡ ತಂತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿಗೆ ಮೆರಗು ನೀಡಿದ್ದಾರೆ.  […]

Tiranga Campaign: ಹರ್ ಘರ್ ತಿರಂಗಾ- ಗಮನ ಸೆಳೆದ ಶಾಂತಿ ನಿಕೇತನ ಶಾಲೆಯ ಮಕ್ಕಳ ತ್ರಿವರ್ಣ ಧ್ವಜ ಯಾತ್ರೆ

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮತ್ತು ಸಡಗರ ಮನೆ ಮಾಡಿದೆ.  ಪ್ರತಿ ಮನದಲ್ಲಿಯೂ ದೇಶಪ್ರೇಮ ತುಂಬಿ ತುಳುಕುತ್ತಿದ್ದು, ಎಲ್ಲರೂ ತ್ರಿವರ್ಣ ಧ್ವಜದತ್ತ ಗಮನ ಹರಿಸಿದ್ದಾರೆ.  ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಸವ ನಾಡು ವಿಜಯಪುರ ನಗರದಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿದ ತಿರಂಗಾ ಯಾತ್ರೆ ಗಮನ ಸೆಳೆಯಿತು. ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೋಂಡ ಸಾವಿರಾರು ವಿದ್ಯಾರ್ಥಿಗಳು ವಂದೇ ಮಾತರಂ.. ಭಾರತ […]

Bheema Flood: ಮಹಾಮಳೆ ಎಫೆಕ್ಟ್- ಉಕ್ಕಿ ಹರಿಯುತ್ತಿರುವ ಭೀಮಾ ನದಿ- ಉಮರಾಣಿ ಬ್ಯಾರೇಜ್ ಮುಳುಗಡೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಿನ ಜಲಾಷಯಗಳು ಭರ್ತಿಯಾಗುತ್ತಿದ್ದು, ಅಪಾರ ಪ್ರಮಾಣ ನೀರನ್ನು ಭೀಮಾ ನದಿಗೆ ಹರಿಬಿಡಲಾಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಉಜನಿ ಜಲಾಷಯದಿಂದ ಅಪಾರ ಪ್ರಮಾಮದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಈ ನೀರು ಈಗ ಕರ್ನಾಟಕವನ್ನು ತಲುಪಿದೆ. ಅಷ್ಟೇ ಅಲ್ಲ, ಬಸವನಾಡು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇರಿದಂತೆ ನಾನಾ ಬ್ಯಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯಗಳ ಗಡಿಯಲ್ಲಿ ಹರಿಯುವ ಭೀಮಾ ನದಿಗೆ ವಿಜಯಪುರ ಜಿಲ್ಲೆಯಲ್ಲಿ ಎಂಟು […]