Journalists Felicitation: ಹಿರಿಯ ಪತ್ರಕರ್ತರಾದ ಶ್ರೀರಾಮ ಪಿಂಗಳೆ, ಗೋಪಾಲ ನಾಯಕ, ರಫಿ ಭಂಡಾರಿ ಅವರಿಗೆ ಕಾನಿಪ ದಿಂದ ಸನ್ಮಾನ

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಸಂಭ್ರಮದಿಂದ ನಡೆಯುತ್ತಿದೆ.  ಇದರ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಹಿರಿಯ ಪತ್ರಕರ್ತ ಶ್ರೀರಾಮ ಪಿಂಗಳೆ ಅವರಿಗೆ ಸನ್ಮಾನ

ಶ್ರೀರಾಮ ಪಿಂಗಳೆ ಅವರಿಗೆ ಸನ್ಮಾನ

ಜಿಲ್ಲೆಯ ಹಿರಿಯ ಪತ್ರಕರ್ತ 91 ವರ್ಷದ ಶ್ರೀರಾಮ ಪಿಂಗಳೆ ಅವರ ಮನೆಗೆ ತೆರಳಿದ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮತ್ತು ಪದಾಧಿಕಾರಿಗಳು ಶ್ರೀರಾಮ ಪಿಂಗಳೆ ದಂಪತಿಯನ್ನು ಪ್ರೀತಿಯಿಂದ ಗೌರವಿಸಿ ರಾಷ್ಟ್ರಧ್ವಜ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ವಾರ್ತಾಧಿಕಾರಿ ಪಿ. ಎಸ್. ಹಿರೇಮಠ, ಹಿರಿಯ ಪತ್ರಕರ್ತರಾದ ಸುಶಿಲೇಂದ್ರ ನಾಯಕ, ಮೋಹನ ಕುಲಕರ್ಣಿ, ಕೆ. ಕೆ. ಕುಲಕರ್ಣಿ, ದೇವೇಂದ್ರ ಹೆಳವರ, ಮಹೇಶ ವಿ. ಶಟಗಾರ, ರಾಹುಲ ಆಪ್ಟೆ ಇಸ್ಮಾಯಿಲ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

ಹಿರಿಯ ನಾಯಕ ಗೋಪಾಲ ನಾಯಕ ಅವರಿಗೆ ಸನ್ಮಾನ

ಗೋಪಾಲ ನಾಯಕ ಅವರಿಗೆ ಸನ್ಮಾನ

ಹಿರಿಯ ಪತ್ರಕರ್ತ ಗೋಪಾಲ ನಾಯಕ ಅವರ ಮನೆಗೆ ತೆರಳಿದ ಕಾನಿಪ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗೋಪಾಲ ನಾಯಕ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ವಾರ್ತಾಧಿಕಾರಿ ಪಿ. ಎಸ್. ಹಿರೇಮಠ, ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಸುಶಿಲೇಂದ್ರ ನಾಯಕ, ಇಂದೂಶೇಖರ ಮಣೂರ, ಕೆ. ಕೆ. ಕುಲಕರ್ಣಿ, ರಘೋತ್ತಮ ಅರ್ಜುಣಗಿ ಮುಂತಾದವರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರಿಗೆ ಸನ್ಮಾನ

ರಫೀ ಭಂಡಾರಿ ಅವರಿಗೂ ಸನ್ಮಾನ

ಇದೇ ವೇಳೆ ಕಾನಿಪ ವತಿಯಿಂದ ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರ ಮನೆಗೆ ತೆರಳಿ ಅವರನ್ನೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ವಾರ್ತಾಧಿಕಾರಿ ಪಿ. ಎಸ್. ಹಿರೇಮಠ, ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಸುಶಿಲೇಂದ್ರ ನಾಯಕ, ಇಂದೂಶೇಖರ ಮಣೂರ, ಕೆ. ಕೆ. ಕುಲಕರ್ಣಿ, ರಘೋತ್ತಮ ಅರ್ಜುಣಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌