Alagur Action: ಜಿಲ್ಲಾ ಕಾಂಗ್ರೆಸ್ ಕಚೇರಿ ಮೇಲೆ ಸಾರರ್ಕರ ಫೋಟೋ ಅಂಟಿಸಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು- ಪ್ರೊ. ರಾಜು ಆಲಗೂರ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ ಮತ್ತು ಬಾಗಿಲುಗಳಿಗೆ ಸಾವರ್ಕರ್ ಅವರ ಫೋಟೋಗಳನ್ನು ಅಂಟಿಸಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಆಗ್ರಹಿಸಿದ್ದಾರೆ.

ಈ ಘಟನೆ ತಿಳಿದ ನಂತರ ಕಚೇರಿಗೆ ಆಗಮಿಸಿದ ಅವರು ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಪ್ರೊ. ರಾಜು ಆಲಗೂರ, ಸಾವರ್ಕರ್ ಫೋಟೊ ಅಂಟಿಸಿದ ಬಿಜೆಪಿ ಕಾರ್ಯಕರ್ತನ‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಕ್ಷಣವೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು.  ಕ್ರಮ ಕೈಗೊಳ್ಳದಿದ್ದರೆ ನಾವೂ ಸಹ ಹೋರಾಟ ಮಾಡುತ್ತೇವೆ.  ಬಿಜೆಪಿ ಕಚೇರಿಗೆ ಟಿಪ್ಪು ಸುಲ್ತಾನ್ ಫೋಟೋ ಅಂಟಿಸಬೇಕಾಗುತ್ತದೆ.  ಇಂದು ಬಿಜೆಪಿ ಕಾರ್ಯಕರ್ತನ‌ ವಿರುದ್ಧ ದೂರು ನೀಡುತ್ತೇವೆ.  ಬಿಜೆಪಿ ಕಾರ್ಯಕರ್ತನ‌ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಟಿಪ್ಪುವಿನ ಭಾವಚಿತ್ರ ಅಂಟಿಸುತ್ತೇವೆ.  ಬಿಜೆಪಿ ಕಚೇರಿಗೆ ಭಾವಚಿತ್ರ ಅಂಟಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಸಾವರ್ಕರ್ ವಿಚಾರ ನಮ್ಮ ಪಕ್ಷಕ್ಕೂ ವಿಚಾರಧಾರೆ ಭಿನ್ನವಾಗಿದೆ.  ಅಂತಹ ಸಾವರ್ಕರ್ ಫೋಟೋ ನಮ್ಮ ಕಚೇರಿಗೆ ಅಂಟಿಸಿರೋದು ನಮಗೆ ನೋವು ತರಿಸಿದೆ ಎಂದು ಪ್ರೊ. ರಾಜು ಆಲಗೂರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದರು.

Leave a Reply

ಹೊಸ ಪೋಸ್ಟ್‌