Savarkar Photo: ಕಾಂಗ್ರೆಸ್ ಕಚೇರಿ ಹೊರಗೋಡೆಗಳಿಗೆ ಸಾವರ್ಕರ್ ಫೋಟೋ ಅಂಟಿಸಿದ ಕಿಡಿಗೇಡಿಗಳು

ವಿಜಯಪುರ: ರಾಜ್ಯದಲ್ಲಿ ಸಾವರ್ಕರ ವಿವಾದ ತೀವ್ರವಾಗಿದ್ದು, ಕಿಡಗೇಡಿಗಳು ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ ಫೋಟೋ ಅಂಟಿಸಿದ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆಸಿದೆ.

ವಿಜಯಪುರ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು‌ ವೀರ ಸಾವರ್ಕರ ಅವರ ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ.

ಕಾಂಗ್ರೆಸ್ ಕಚೇರಿಯ ಹೊರಗಡೆ ಗೋಡೆಗೆ ನಾನಾ ಕಡೆ ಸಾವರ್ಕರ ಫೋಟೋ ಅಂಟಿಸಲಾಗಿತ್ತು. ‌ರವಿವಾರವತಡರಾತ್ರಿ ಹತ್ತಾರು ಫೋಟೋಗಳನ್ನು ಅಂಟಿಸಿ‌‌ದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಾಂಗ್ರೆಸ್ ಕಚೇರಿಯ ಕಟ್ಟಡ, ಬಾಗಿಲು, ಬೋರ್ಡ್ ಗೆ ಸಾವರ್ಕರ ಫೋಟೋ ಅಂಟಿಸಲಾಗಿತ್ತು.

ಈ ವಿಷಯ ತಿಳಿದ ಜಲನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಾವರ್ಕರ ಫೋಟೋ ತೆರವುಗೊಳಿಸಿದ್ದಾರೆ‌

Leave a Reply

ಹೊಸ ಪೋಸ್ಟ್‌