Earthquake Again: ಗುಮ್ಮಟ ನಗರಿಯಲ್ಲಿ ಮತ್ತೆ ಭೂಕಂಪನ- ತೀವ್ರತೆ ಎಷ್ಟು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನ ಅನುಭವವಾಗಿದೆ.

ಶನಿವಾರ ವಿಜಯಪುರ ನಗರದಲ್ಲಿ ಇದು ಅನುಭವಕ್ಕೆ ಬಂದಿದ್ದರೆ, ರವಿವಾರ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಭೂಕಂಪನ ಸಂಭವಿಸಿತ್ತು.

ಈಗ ಮಧ್ಯಾಹ್ನ ಮತ್ತೆ ಗುಮ್ಮಟ ನಗರಿ ವಿಜಯಪುರದಲ್ಲಿ ಭೂಕಂಪನ ಉಂಟಾಗಿದೆ.  ಸಂ. 4.26ಕ್ಕೆ ಈ ಭೂಕಂಪ ಉಂಟಾಗಿದೆ.  ಭೂಮಿಯಿಂದ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ.  ಈ ಭೂಕಂಪದ ಕೇಂದ್ರ ಬಿಂದು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾ. ಪಂ. ವ್ಯಾಪ್ತಿಯ ಆಗ್ನೆಯ ಭಾಗದಲ್ಲಿ 2.9 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾಮನ್ಮನವರ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: 

Madabhavi Epicenter: 3.5 ತೀವ್ರತೆ, ಮದಭಾವಿ ಬಳಿ ಭೂಕಂಪನ ಕೇಂದ್ರ ಬಿಂದು-

ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭೂಕಂಪನ ಉಂಟಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Leave a Reply

ಹೊಸ ಪೋಸ್ಟ್‌