Drought Elected: ಬರಗಾಲ ನಿವಾರಣಾ ಸಹಕಾರ ಸಂಘದ ಅದ್ಯಕ್ಷರಾಗಿ ಗೂಳಪ್ಪ ಶೆಟಗಾರ ಪುನರಾಯ್ಜೆ- ಉಳಿದ ಪದಾಧಿಕಾರಿಗಳ ಮಾಹಿತಿ ಇಲ್ಲಿದೆ

ವಿಜಯಪುರ: ಜಿಲ್ಲಾ ಬರಗಾಲ ನಿವಾರಣಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರಾಗಿ ಬಸನಗೌಡ ಅ. ಪಾಟೀಲ, ಗೂಳಪ್ಪ ಸಿ. ಶೆಟಗಾರ, ರಮೇಶ, ಆಳೂರ, ರಾಜೇಂದ್ರ ಮ. ಪಾಟೀಲ, ರಾಜಶೇಖರ ವಿ. ಗಚ್ಚಿನಮಠ, ಲಕ್ಷ್ಮಣ ಯ. ಇಂಡಿ ಶರಣಗೌಡ ಬಾ, ಪಾಟೀಲ, ಸಂಗನಸಿಂಗ ಗು. ಹಜೇರಿ, ರತ್ನಮಾಲಾ ಸು. ಅಕ್ಕಿ, ಶಿವಕ್ಕ ಪ್ರ. ಕುಡಚಿ, ನಂದಕಿಶೋರ ರಾ. ರಾಠೋಡ, ಬಸವರಾಜ ಸಂ. ಬಂಡಿ, ಸಂಜೀವ ಬ. ಯಲದಿ, ಸಿದ್ರಾಮಪ್ಪ ದು. ಕುಮಾನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2022 ರಿಂದ 5 ವರ್ಷದ ಅವಧಿಯವರೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ. ಬಿ. ಪಾಟೀಲ ಘೋಷಿಸಿದ್ದಾರೆ.

ಅಧ್ಯಕ್ಷರಾಗಿ ಗೂಳಪ್ಪ ಸಿದ್ದಪ್ಪ ಶೆಟಗಾರ ಅವಿರೋಧ ಆಯ್ಜೆ

ಈ ಮದ್ಯೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿಯೂ ಅವಿರೋಧ ಆಯ್ಕೆ ನಡೆದಿದೆ.

ವಿಜಯಪುರ ಜಿಲ್ಲಾ ಬರಗಾಲ ನಿವಾರಣಾ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಗೂಳಪ್ಪ ಸಿದ್ದಪ್ಪ ಶೆಟಗಾರ, ಉಪಾಧ್ಯಕ್ಷರಾಗಿ ರಾಜೇಂದ್ರ ಮ. ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಜಯಪುರ ಜಿಲ್ಲಾ ಬರಗಾಲ ನಿವಾರಣಾ ಸಹಕಾರ‌ ಸಂಘದ ವ್ಯವಸ್ಥಾಪಕರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌