Chitradurga Yatnal: ಟಿಪ್ಪು ಪರ ಒಲವಿದ್ದವರಾರೂ ಉದ್ಧಾರವಾಗಿಲ್ಲ- ಚಿತ್ರದುರ್ಗ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ- ಶಾಸಕ‌ ಯತ್ನಾಳ

ವಿಜಯಪುರ: ಟಿಪ್ಪು ಸುಲ್ತಾನನ ಪರ ಒಲವಿದ್ದವರಾರಿಗೂ ಒಳ್ಲೆಯದಾಗಿಲ್ಲ. ಈಗ ಚಿತ್ರದುರ್ಗ ಮುರುಘಾ ಶರಣರಿಗೆ ಸಂಕಷ್ಟ ಎದುರಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಮಠಕ್ಕೆ ಉತ್ತಮ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಚಿತ್ರದುರ್ಗ ಮಠ ಕೆಲಸವನ್ನು ಸರಕಾರ ಮಾಡಬೇಕು. ಒಬ್ಬ ಒಳ್ಳೆಯ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಸರಕಾರ ಮತ್ತು ವೀರಶೈವ ಲಿಂಗಾಯತ ಸಮಾಜ ಮುಂಬರುವ ದಿನಗಳಲ್ಲಿ ಒಳ್ಳೆಯ ಮಠಾಧೀಶರನ್ನು ಅಲ್ಲಿಗೆ ನೇಮಕ ಮಾಡಬೇಕು. ಇಂಥ ಗಂಭೀರ ಆರೋಪಗಳು ಬಂದಮೇಲೆ ಇಂಥವರನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಈಗ ಸರಕಾರ ಮತ್ತು ನಾಡಿನ ಎಲ್ಲ ಧರ್ಮದ ಹಿರಿಯರು ಸೇರಿ ಈ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಚಿತ್ರದುರ್ಗ ಮಠಕ್ಕೆ ಸಾವಿರಾರು ಎಕರೆ ಜಮೀನಿದೆ. ಸಾವಿರಾರು ಕೋಟಿ ಇದೆ ಆಸ್ತಿ ಇದೆ, ಇದು ಕೆಟ್ಟ ಜನರ ಕೈಗೆ ಸಿಗುವಂತಾಗಬಾರದು ಎಂದು ಯತ್ನಾಳ ಹೇಳಿದರು.

ಪ್ರಗತಿಪರರೇ ಸ್ವಾಮೀಗಳನ್ನು ಹಾಳು ಮಾಡಿದ್ದಾರೆ

ಪ್ರಗತಿಪರರೇ ಸ್ವಾಮೀಜಿಗಳನ್ನು ಹಾಳು ಮಾಡಿದ್ದಾರೆ. ಈ ದೇಶ ಹಾಳಾಗಲು ಬುದ್ದಿಜೀವಿಗಳು ಮತ್ತು ಪ್ರಗತಿಪರವೇ ಕಾರಣ. ಸ್ವಾಮಿಜೀಗಳೇ ಇಂಥವರನ್ನು ನಿರ್ಮಾಣ ಮಾಡಿದ್ದರು. ಈಗ ಅವರು ಮಾಡಿದ ಕೆಲಸವೇ ಅವರಿಗೆ ಹತ್ತಿದೆ. ಈಗ ಅವರಿಗೆ ಯಾರೂ ಬೆನ್ನಿಗೆ ಯಾರು ನಿಲ್ಲುವುದಿಲ್ಲ. ನಿನ್ನೆ ಸಿದ್ದರಾಮಯ್ಯನವರೇ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಯಾರ ಬೆನ್ನಿಗೆ ಯಾರೂ ನಿಲ್ಲುವುದಿಲ್ಲ ಎಙದು ಅವರು ಹೇಳಿದರು.

ಸ್ವಾಮೀಜಿ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಟಿಪ್ಪು ಸುಲ್ತಾನನ ಮೂರ್ತಿಯನ್ನು ತಂದು ಮಠದಲ್ಲಿ ಇಟ್ಟುಕೊಂಡಿದ್ದರು. ಗೋವುಗಳ ಬಗ್ಗೆಯೂ ಅವಹೇಳನವಾಗಿ ಮಾತನಾಡಿದರು. ಕೆಲವು ಸ್ವಾಮೀಜಿಗಳು ಪ್ರಗತಿಪರರ ಜೊತೆ ಸೇರಿ ಹೀಗೆ ಮಾಡಿದ್ದಾರೆ. ಹಿಂದೂ ಧರ್ಮ ರಕ್ಷಣೆಗೆ ಮುಂದಾಗಿಲ್ಲ. ಕಾವಿ ಇರುವುದು ಹಿಂದೂ ಧರ್ಮದ ರಕ್ಷಣೆಗಾಗಿ. ಇಸ್ಲಾಂ ಧರ್ಮದ ವರ್ಣನೆ ಮತ್ತು ಗುಣಗಾನ ಮಾಡಲು ನೀವು ಸ್ವಾಮೀಜಿಗಳಾಗಬೇಕಿಲ್ಲ. ಹಿಂದೂ ಧರ್ಮವನ್ನು ಗುಣಗಾನ ಮಾಡಿ‌. ಹಿಂದೂ ಧರ್ಮವನ್ನು ಬೆಳೆಸಿ. ಅನ್ಯ ಧರ್ಮೀಯರನ್ನು ಮತಾಂತರ ಮಾಡಿ ಹಿಂದೂ ಧರ್ಮಕ್ಕೆ ಸೇರಿಸಿ. ಲವ್ ಜಿಹಾದ್ ನ್ನು ತಪ್ಪಿಸಿ. ಅದನ್ನು ಬಿಟ್ಟು ವಿಭೂತಿ ಮತ್ತು ಕುಂಕುಮ ಹಚ್ಚಿಕೊಂಡು ಕೊಂಡು ಹೋಗಿ ಟಿಪ್ಪು ಸುಲ್ತಾನನನ್ನು ವರ್ಣನೆ ಮಾಡುವುದು ಸರಿಯಲ್ಲ. ಟಿಪ್ಪು ಸುಲ್ತಾನನನ್ನು ಯಾರೆಲ್ಲ ವರ್ಣನೆ ಮಾಡಿದ್ದಾರೆ ಅವರೆಲ್ಲರೂ ಹೋಗಿದ್ದಾರೆ. ಈ ಹಿಂದೆ ಟಿಪ್ಪು ಸುಲ್ತಾನ್ ಬಗ್ಗೆ ಸಿನಿಮಾ ಮಾಡಿದ್ದ ವ್ಯಕ್ತಿ ನಿರ್ಮಿಸಿದ ಪೆಂಡಲ್ ಹುಟ್ಟು ಹೋಗಿತ್ತು. ವಿಜಯ ಮಲ್ಯ ಟಿಪ್ಪು ಸುಲ್ತಾನ್ ಖಡ್ಗ ತಂದಿದ್ದ. ಆತ ದೇಶವನ್ನು ಬಿಟ್ಟು ಓಡಿ ಹೋದ. ಸಿದ್ದರಾಮಯ್ಯನವರು ಟಿಪ್ಪು ಸುಲ್ತಾನ್ ಜಯಂತಿ ಮಾಡಿ ಮೂವತ್ತು ಸಾವಿರ ಮತಗಳ ಅಂತರದಿಂದ ಸೋತರು. ಈಗ ಸ್ವಾಮೀಜಿ ಪಾಳಿ ಬಂದಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ನಾಯಕರು ಕೂಡ ಟಿಪ್ಪು ಸುಲ್ತಾನನ ಗುಣಗಾನ ಮಾಡಬೇಡಿ. ಇಲ್ಲದಿದ್ದರೇ ಅವರಿಗೂ‌ ಉಳಿದವ ಪರಿಸ್ಥಿತಿ ಎದುರಾಗಲಿದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಚಿತ್ರದುರ್ಗ ಮಠ ವೀರಶೈವ ಮಠ. ಇದು ಹಿಂದೂ ಮಠ. ಹಿಂದೂ ಧರ್ಮದಲ್ಲಿ ಸಾಕಷ್ಟು ಜನ ಸಂತರಿದ್ದಾರೆ. ಆದಿ ಶಂಕರಾಚಾರ್ಯ ಮತ್ತಿತರರನ್ನು ಬಿಟ್ಟು ಲಕ್ಷಾಂತರ ಹಿಂದುಗಳನ್ನು ಕೈಕೊಲೆ ಮಾಡಿದ್ದ ಟಿಪ್ಪು ಸುಲ್ತಾನ್ ಮತ್ತು ಆತನ ತಂದೆಯ ಬಗ್ಗೆ ವರ್ಣನೆ ಮಾಡಿದ್ದು ತಪ್ಪು. ಚಿತ್ರದುರ್ಗ ಮದಕರಿ ನಾಯಕರು ಆಳಿದ ಪ್ರದೇಶ ಒನಕೆ ಒಬ್ಬವ್ವಳ ಇತಿಹಾಸ ಚಿತ್ರದುರ್ಗಕ್ಕಿದೆ. ಟಿಪ್ಪು ಸುಲ್ತಾನನ ಅಪ್ಪ ಹೈದರಲಿ ಚಿತ್ರದುರ್ಗದ ಮೇಲೆ ದಾಳಿ ಮಾಡಿದ್ದ ಈ ಚಿತ್ರದುರ್ಗ ಮಠಕ್ಕೆ ಮದಕರಿ ನಾಯಕರು ಸಾವಿರಾರು ಎಕರೆ ಜಮೀನನ್ನು ನೀಡಿದ್ದರು. ಆದರೆ ಸ್ವಾಮೀಜಿ ಮಠದಲ್ಲಿ ಟಿಪ್ಪು ಸುಲ್ತಾನನ ಮೂರ್ತಿಯನ್ನು ಇಟ್ಟರು. ಇದು ಪಾಪದ ಕೆಲಸವಲ್ಲವೇ? ಎಂದು ಪ್ರಶ್ನಿಸಿದ ಯತ್ನಾಳ, ಟಿಪ್ಪು ಸುಲ್ತಾನ ಲಕ್ಷಾಂತರ ಹಿಂದುಗಳನ್ನು ಕೊಲೆ ಮಾಡಿದ್ದಾನೆ. ಅಲ್ಲದೇ, ಮದಕರಿ ನಾಯಕರ ವಿರುದ್ಧ ಯುದ್ಧ ಮಾಡಿದ್ದ. ಹೀಗಾಗಿ ಈ ಮಠನ್ನು ಉಳಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನ ಆಗ್ರಹಿಸಿದರು.

Leave a Reply

ಹೊಸ ಪೋಸ್ಟ್‌