Central Team Visit: ಕೇಂದ್ರ ತಂಡದಿಂದ ಬಸವ ನಾಡಿನಲ್ಲಿ ಅತೀವೃಷ್ಠಿ, ಪ್ರವಾಹದಿಂದಾದ ಹಾನಿ ಪರಿಶೀಲನೆ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಹಾನಿಯ ಕುರಿತು ಅಧ್ಯಯನ ನಡೆಸಲು ಕೇಂದ್ರ ತಂಡ ಜಿಲ್ಲೆಗೆ ಆಗಮಿಸಿದೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಕೆ. ಮನೋಹರನ್ ಮತ್ತು ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ಬಿ. ತಿವಾರಿ ಅವರನ್ನು ಒಳಗೊಂಡ ಇಬ್ಬರು ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದೆ.

ತಾಳಿಕೋಟೆಗೆ ಆಗಮಿಸಿದ ಕೇಂದ್ರ ತಂಡವನ್ನು ವಿಜಯಪುರ ಜಿಲ್ಲಾಧಿಜಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಬರಮಾಡಿಕೊಂಡರು.

ತಾಳಿಕೋಟೆಗೆ ಆಗಮಿಸಿದ ಕೇಂದ್ರ ತಂಡವನ್ನು ವಿಜಯಪುರ ಜಿಲ್ಲಾಡಳಿತ ಸ್ವಾಗತಿಸಿತು

ವಿಜಯಪುರ ಜಿಲ್ಲೆಯ ತಾಳಿಕೋಟೆ ಸೇರಿದಂತೆ ನಾಮಾ ತಾಲೂಕುಗಳಿಗೆ ತೆರಳಿದ ಈ ತಂಡ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯ ಕುರಿತು ಪರಿಶೀಲನೆ ನಡೆಸಿತು.

ಮೊದಲಿಗೆ ಸಾತಿಹಾಳಕ್ಕೆ ಆಗಮಿಸಿದ ಈ ತಂಡ ಅಲ್ಲಿ ಡೋಣಿನಲ್ಲಿ ಪ್ರವಾದ ಬೆಳೆ ಹಾನಿಯನ್ನು ಪರಿಶೀಲನೆ ನಡೆಸಿತು.

ಸಾತಿಹಾಳ ಸೇತುವೆ ಬಳಿ ಕೇಂದ್ರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು

ನಂತರ ಇದೇ ತಂಡ ತಾಳಿಕೋಟೆ ತಾಲೂಕಿನ‌ ಮಿಣಜಿಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಳಿಕೋಟೆ ಸೇತುವೆ ಬಳಿ ಡೋಣಿ ಪ್ರವಾಹದಿಂದಾದ ಹಾನಿಯಾದ ಬೆಳೆಗಳ ಕುರಿತು ಕೇಂದ್ರ ತಂಡ ಅಧ್ಯಯನ‌ ನಡೆಸಿತು

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ‌ ಸಿದ್ದರಾಮಯ್ಯ ಬರಗಿಮಠ ಮತ್ತು ಜಿಲ್ಲಾಧಿಕಾರಿ ಕಚೇರಿಯ ವಿಕೋಪ ನಿರ್ವಹಣೆ ಕೇಂದ್ರದ ವಿಪತ್ತು ನಿರ್ವಹಣೆ ವಿಭಾಗದ ಅಧಿಕಾರಿ ರಾಕೇಶ್ ಜೈನಾಪುರ ಮುಂತಾದವರು ಉಪಸ್ಥಿತರಿದ್ದು, ಕೇಂದ್ರ ಅಧ್ಯಯನ ತಂಡಕ್ಕೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಬೆಳೆ ಮತ್ತು ಆಸ್ತಿಪಾದ್ಯ ಹಾನಿಯ ಕುರಿತು ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌