Earthquake Sunilgouda: ಬಸವ ನಾಡಿನಲ್ಲಿ ಭೂಕಂಪನ- ಸದನದಲ್ಲಿ ಧ್ವನಿ‌ ಎತ್ತಿದ ಸುನೀಲಗೌಡ ಪಾಟೀಲ

ವಿಜಯಪುರ: ಬಸವನ ನಾಡು ವಿಜಯಪುರ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಭೂಕಂಪನದ ಕುರಿತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಜನರು ಆತಂಕದಲ್ಲಿದ್ದಾರೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನವಾಗುತ್ತದೆ ಎಂದು ಜನ ಹೆದರುತ್ತಿದ್ದಾರೆ.  2010ರಲ್ಲಿ 24 ಬಾರಿ ಮತ್ತು 2021ರಲ್ಲಿ 25 ಬಾರಿ ಸೇರಿದಂತೆ ಈವರೆಗೆ ಒಟ್ಟು 52 ಬಾರಿ ಧೂಮಿ ಕಂಪಿಸಿದೆ ಎಂದು […]