Drugs Seize: ಬೆಂಗಳೂರಿನಲ್ಲಿ ಅಬಕಾರಿ ದಾಳಿ- ರೂ. 1. 40 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ರೂ. 1.40 ಲಕ್ಷ ಮೌಲ್ಯದ ಒಣಗಿದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ಎ. ಎಲ್. ನಾಗೇಶ ಮತ್ತು ಉಪಾಯುಕ್ತ ವೀರಣ್ಣ ಬಾಗೇವಾಡಿ ಮಾರ್ಗದರ್ಶನದಲ್ಲಿ ಮಹದೇವಪುರ ವಲಯ ವ್ಯಾಪ್ತಿಯ ಅಬಕಾರಿ ಇನ್ಸಪೆಕಕ್ಟರ್ ಎ. ಎ. ಮುಜಾವರ ಮತ್ತು ಸಿಬ್ಬಂದಿ ಕುಂದಲಹಳ್ಳಿ ಗೇಟ್ ಹತ್ತಿರ ಧಾಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಕೇರಳ ಮೂಲಕ ಆಲಪ್ಪುಳ ಮೂಲದ ಆರೋಪಿ ಸಿಬಿ ಕೆ. ಜೆ. ಎಂಬಾತನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಮಹಾದೇವಪುರ ಅಬಕಾರಿ ಪೊಲೀಸರು ವಶಪಡಿಸಿಕೊಂಡಿರುವ ಮಾದಕ ದ್ರವ್ಯ

ಅಲ್ಲದೇ, ಆರೋಪಿ ಬಳಿಯಿದ್ದ 17 ಗ್ರಾಂ ಮೆಥಾಫೇಟಾಮೈನ್(ಕ್ರಿಸ್ಟಲ್ ಮೆಥ್) ಮತ್ತು 690 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.  ಆರೋಪಿಯ ವಿರುದ್ಧ ಎನ್ ಡಿ ಪಿ ಎಸ್ ಕಾಯಿದೆ 1985 ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌