Dasara Kanta Nayak: ದಸರಾ ಹಿನ್ನೆಲೆ-ನಾಗಠಾಣ ಮತಕ್ಷೇತ್ರದ ನಾನಾ ಕಡೆ ಮಹಿಳೆಯೊಂದಿಗೆ ಸಂವಾದ ನಡೆಸಿದ ಕಾಂತಾ ನಾಯಕ

ವಿಜಯಪುರ: ದಸರಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ನಾಗಠಾಣ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ನಾಗಠಾಣ ಮತಕ್ಷೇತ್ರದ ಬೊಮ್ಮನಳ್ಳಿ, ಚಡಚಣ ನಗರ, ರೇವತಗಾಂವ, ಶಿರಾಡೋಣ , ಕೋಂಕಣಗಾಂವ, ಜೀರಂಕಲಗಿ, ಟಾಕಳಿ, ಕೆರೂರ ಗ್ರಾಮಗಳಲ್ಲಿ ಅವರು ಮಹಿಳೆಯರೊಂದಿಗೆ ಸಂವಾದ ನಡೆಸಿದರು.   ಅಲ್ಲದೇ, ಅರಿಶಿನ ಕುಂಕುಮ ಕಾರ್ಯಕಮಗಳಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಪ್ರಮುಖರು ಮತ್ರು ಮಹಿಳೆಯು ಪಾಲ್ಗೊಂಡಿದ್ದರು.

CM Tour: ಶುಕ್ರವಾರ ಆಲಮಟ್ಟಿಗೆ ಜಲಾಷಯಕ್ಕೆ ಸಿಎಂ‌ ಬಾಗೀನ ಹಿನ್ನೆಲೆ- ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಸವ ನಾಡಿನ ಆಲಮಟ್ಟಿಗೆ ಭೇಟಿ ನೀಡುತ್ತಿದ್ದು, ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಲ್ಲಿ ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿಯಲ್ಲಿ ನಡೆಸಿದಿರುವ ಸಿದ್ಧತೆಗಳನ್ನು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಆಲಮಟ್ಟಿಗೆ ತೆರಳಿ ಪರಿಶೀಲನೆ ನಡೆಸಿದರು. ಆಲಮಟ್ಟಿ ಅಣೆಕಟ್ಟು ಮತ್ತು ಹೆಲಿಪ್ಯಾಡ್ ಗೆ ಭೇಟಿ ನೀಡಿದ ಉಭಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಶುಕ್ರವಾತ ಬೆಳಿಗ್ಗೆ ಹುಬ್ಬಳ್ಳಿಯಿಂದ ನಿಡಗುಂದಿ […]