GOCC Felicitaiton: ಜಿಓಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ, ಹಣಮಂತ ಕೊಣದಿ, ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರಗೆ ಸನ್ಮಾನ

ವಿಜಯಪುರ: ವಿಜಯಪುರ- ಬಾಗಲಕೋಟೆ ವ್ಯಾಪ್ತಿಯನ್ನು ಹೊಂದಿರುವ ಜಿಓಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ ಹಣಮಂತ ಕೊಣದಿ ಮತ್ತು ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರ ಅವರನ್ನು ನಾನಾ ಮುಖಂಡರು ಸನ್ಮಾನಿಸಿದರು.

ಬ್ಯಾಂಕಿನ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ. ಎಸ್. ಮಠ ಸಾನಿಧ್ಯ ವಹಿಸಿದ್ದರು.  ಈ ಸಂದರ್ಭದಲ್ಲಿ ಮುಖಂಡರಾದ ಇಕಲಾಸ ಸುನ್ನೇವಾಲೆ

ಮತ್ತೀತರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮತ್ತು ಬ್ಯಾಂಕಿನ ನಿರ್ದೇಶಕ ಅರ್ಜುನ ಲಮಾಣಿ, ಪ್ರಧಾನ ಕಾರ್ಯದರ್ಶಿ ಝಾಕೀರ ಇಂಡಿಕರ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ. ಎಸ್. ಕಳಸಗೊಂಡ, ಜಿಓಸಿಸಿ ಬ್ಯಾಂಕಿನ ನಿರ್ದೇಶಕ ಸಿ. ಟಿ. ಜತ್ತಿ, ಚನ್ನಬಸುಗೋಳ, ಸಮಾಜ ಸೇವಕರಾದ ನಿಜಾಮುದ್ದೀನ ಹಿರಿಯಾಳ, ಮೇಟಿ, ಆರ್. ಯು. ರಾಠೋಡ, ಕೆ. ಟಿ. ರಾಠೋಡ, ಕಪಾಳಿ, ಆರ್. ಸಿ. ಬೋಳೆಗಾರ, ಪ್ರಾ. ಪ. ಸ. ಸಂಘದ ಅಧ್ಯಕ್ಷ ಎಂ. ಎಲ್. ನಾಯಿಕ, ನಿರ್ದೇಶಕ ಆರ್. ಡಿ. ಬಾಳಿ, ನಂದ ತಿಕೋಟಿ, ಎಸ್. ಜಿ. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಎಂ. ಐ. ಕಾಗವಾಡ ನಿರೂಪಿಸಿದರು. ಕೆ. ಆರ್. ರಾಠೋಡ ವಂದಿಸಿದರು.

 

Leave a Reply

ಹೊಸ ಪೋಸ್ಟ್‌