Dasara Padayatre: ಬಸವ ನಾಡಿನಲ್ಲಿ ದಸರಾ ಸಂಭ್ರಮ- ಮಹಿಳೆಯರಿಂದ ದುರ್ಗಾ ದೌಡ್- ಗಮನ ಸೆಳೆದ ಅಪ್ಪು ಪಟ್ಟಣಶೆಟ್ಟಿ ಸರಳತೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಎಲ್ಲ ಕಡೆಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ.  ನಾಡಹಬ್ಬದ ಅಂಗವಾಗಿ ನಾನಾ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಧಾರ್ಮಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ತರಹೇವಾರಿ ಪೂಜೆಗಳು ನಡೆಯುತ್ತಿವೆ.

ವಿಜಯಪುರ ನಗರದಲ್ಲಿ ದಸರಾ ಅಂಗವಾಗಿ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಮಹಿಳೆಯರು

ಈ ಮಧ್ಯೆ ದಸರಾ ಅಂಗವಾಗಿ ಹಿಂದೂ ಸಂಘಟನೆಯ ಮಹಿಳಾ ನಾಯಕರು ದುರ್ಗಾ ದೌಡ ಪಾದಯಾತ್ರೆ ನಡೆಸಿದ್ದಾರೆ. ವಿಜಯಪುರ ನಗರದ ಸಾವಿರಾರು ಜನ ಮಹಿಳಾ ಕಾರ್ಯಕರ್ತರು ದುರ್ಗಾದೇವಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ‌.  ದಿಶಾ ಫೌಂಡೇಶನ್ ನಾಯಕಿ ಮಂಚಾಲೇಶ್ವರ ನೇತೃತ್ವದಲ್ಲಿ ಈ ದುರ್ಗಾ ದೌಡ ಪಾದಯಾತ್ರೆ ನಡೆಯಿತು.

ವಿಜಯಪುರ ನಗರದ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ದುರ್ಗಾ ದೌಡ ಪಾದಯಾತ್ರೆ ಶಿವಾಜಿ ಚೌಕ್ ವರೆಗೆ ನಡೆಯಿತು. ವಿಜಯಪುರ ನಗರದ ಪ್ರಮುಖ ರಸ್ತೆಗಳಿಗೆ ಸಂಚರಿಸಿದ ಸಾವಿರಾರು ಮಹಿಳೆಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.  ತಲೆಗೆ ಕೇಸರಿ ಪೇಟ ಮತ್ತು ಬಿಳಿ ಬಟ್ಟೆ ಧರಿಸಿದ ಹಲವು ಮಹಿಳೆಯರು ಗಮನ ಸೆಳೆದರು.

ಇನ್ನೂ ಬಹುತೇಕ ಮಹಿಳೆಯರು ಕೇಸರಿ ರುಮಾಲು ಸುತ್ತಿಕೊಂಡರೆ, ಇನ್ನೂ ಹಲವಾರು ಮಹಿಳೆಯರು ಕೇಸರಿ ರುಮಾಲಿನ ಹಾಗೂ ಕೇಸರಿ ಸೀರೆ ತಟ್ಟು ಮೆರವಣಿಗೆಗೆ ಮೆರಗು ನೀಡಿದರು.  ಸಾವಿರಾರು ಮಹಿಳೆಯರು ಸಾಲು ಸಾಕಾಗಿ ಮತ್ತು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸಳೆಯಿತು.

ಪಾದಯಾತ್ರೆಯುದ್ಧಕ್ಕೂ ಈ ಮಹಿಳೆಯರು ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತ ಸಾಗಿದರು. ದಸರಾ ಹಬ್ಬದ ದಿನ ಪ್ರಮುಖವಾಗಿ ಹೆಣ್ಣು ದೇವರನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕೇವಲ ಸಾಂಕೇತಿಕವಾಗಿ‌ ಆಚರಿಸಲಾದ ನಾಡಹಬ್ಬ ಈ ಬಾರಿ ಮತ್ತೆ ಗತವೈಭವಕ್ಕೆ ಮರಳಿರುವುದು ವಿಶೇಷ ಎನಿಸಿತು.

ಹಿಂದೂ ಸಂಘಟನೆಯ ಮಹಿಳಾ ಮುಖಂಡರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಕೂಡ ಗಮನಾರ್ಹವಾಗಿತ್ತು. ಮೆರವಣಿಗೆಯಲ್ಲಿ ಕೈಯಲ್ಲಿ ಭಗವಾ ದ್ವಜ ಹಿಡಿದು ಜನಜಾಗೃತಿ ಮೂಡಿಸಲಾಯಿತು.  ವಿಜಯಪುರ ನಗರದ ಶಿವಾಜಿ ಚೌಕಿಗೆ ಆಗಮಿಸಿದದ ಬಳಿಕೆ ಮೆರವಣಿಗೆಯನ್ನು ಮುಕ್ತಾಯಗೊಳಿಸಲಾಯಿತು.  ಈ ಪಾದಯಾತ್ರೆಗೆ ಮಾರ್ಗದರ್ಶನ ನೀಡಿದ ಮಹಾರಾಷ್ಟ್ರದ ಶಿವ ಪ್ರತಿಷ್ಠಾನದ ಸಿದಗೊಂಡ ಮಲ್ಲಪ್ಪ ಗುರೂಜಿ ಈ ಸಂದರ್ಭದಲ್ಲಿ ಮಾತನಾಡಿದರು.

ಈಗ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಲವ್ ಜಹಾದ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಯುವತಿಯರಿಗೆ ಸೂಚನೆ ನೀಡಿದ ಅವರು, ದೇಶಾದ್ಯಂತ 2000 ಲವ್ ಜಿಹಾದ್ ಕೇಸ್ ಳಾಗಿವೆ. ಈಗ ರಾಜ್ಯದಲ್ಲಿಯೂ ಇಂಥ ಪ್ರಕರಣಗ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದುರ್ಗಾದೌ್ ನಲ್ಲಿ ಪಾಲ್ಗೊಂಡ ಯುವತಿಯರು ಎಲ್ಲರಿಗೂ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

 

ಗಮನ ಸೆಳೆದ ಅಪ್ಪು ಪಟ್ಟಣಶೆಟ್ಟಿ ಸರಳತೆ

ಈ ಮಧ್ಯೆ ದುರ್ಗಾ ದೌಡ್ ಶಿವಾಜಿ ಚೌಕ್ ನಲ್ಲಿ ಸಮಾರೋಪ ಆಗುತ್ತಿದ್ದಂತೆ ಪ್ರಮುಖರೆಲ್ಲರೂ ಶಿವಾಜಿ ಪ್ರತಿಮೆಯ ಎದುರು ಸೇರಿ ಸಂದೇಶ ನೀಡಿದರು.  ಆದರೆ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತ್ರ ಎಲ್ಲರಿಗಿಂತಲೂ ಹಿಂದೆ ಅದೂ ಕೂಡ ಬರಿಗಾಲಲ್ಲಿಯೇ ನಿಂತು ದೈವಿ ಭಕ್ತಿ ತೋರಿದರು.  ತುಳಜಾಪುರ ಅಂಬಾ ಭವಾನಿ ಅಪ್ಪಟ ಭಕ್ತರಾಗಿರುವ ಅಪ್ಪು ಪಟ್ಟಣಶೆಟ್ಟಿ ದಾರ್ಮಿಕ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಮೊದಲಿನಿಂದಲೂ ದೇವರನ್ನು ಆರಾಧಿಸುತ್ತಿರುವುದು ಗಮನಾರ್ಹವಾಗಿದೆ.

 

Leave a Reply

ಹೊಸ ಪೋಸ್ಟ್‌