Congress Sambanni: ಡಾ. ಗಂಗಾಧರ ಸಂಬಣ್ಣಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕ

ವಿಜಯಪುರ: ಕಾಂಗ್ರೆಸ್ ಮುಖಂಡ ಡಾ. ಗಂಗಾಧರ ಸಂಬಣ್ಣಿ ಅವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರ ಅನುಮತಿ ಮೇರೆಗೆ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

 

ಡಾ. ಗಂಗಾಧರ ಸಂಬಣ್ಣಿ ಅವರಿಗೆ ಪ್ರೊ. ರಾಜು ಆಲಗೂರ ನೇಮಕಾತಿ ಆದೇಶ ಪ್ರತಿ ನೀಡಿದರು

 

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ರಾಜು ಆಲಗೂರ ಅವರು ಸಂಬಣ್ಣಿ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂತಾ ನಾಯಕ, ಸಂತೋಷ ಬಾಲಗಾಂವಿ, ಟಪಾಲ ಎಂಜಿನಿಯರ್, ನಿಂಗಪ್ಪ ಸಂಗಾಪುರ, ಲಕ್ಷ್ಮಣ ಇಳಕಲ, ಪ್ರಕಾಶ ಪುರದಾಳ, ವಿಜಯಕುಮಾರ ಕಾಳೆ, ರಾಜೇಶ್ವರಿ ಚೊಳಕೆ, ವಸಂತ ಹೊನಮೋಡೆ, ಧುಂಡಸಿ ಮುಂತಾದವರು ಉಪಸ್ಥಿತರಿದ್ದರು.

ಡಾ. ಗಂಗಾಧರ ಸಂಬಣ್ಣಿ ಸಂತಸ

ಈ ಮುಂಚೆ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾಗಿದ್ದ ಡಾ. ಗಂಗಾಧರ ಸಂಬಣ್ಣಿ ತಮಗೆ ವಹಿಸಲಾಗಿರುವ ಹೊಸ ಜವಾಬ್ದಾರಿ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ನೇಮಕಕ್ಕೆ ಕಾರಣರಾದ ಡಿ. ಕೆ. ಶಿವಕುಮಾರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಪ್ರೊ. ರಾಜು ಆಲಗೂರ, ಕೆಪಿಸಿಸಿ ಮತ್ತು ಡಿಸಿಸಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌