Ainapur Felicitation: ವಸುಂಧರಾ ಮನೋಹರ ಐನಾಪುರ ಅವರಿಗೆ ಉಡುಪಿಯಲ್ಲಿ ಎಸ್ ಬಿ ಐ ನಿಂದ ಸನ್ಮಾನ

ವಿಜಯಪುರ: ಶ್ರೀ ಕೃಷ್ಣ ನಗರಿ ಉಡುಪಿಯ ಅಮೃತ ಗಾರ್ಡನ್ ದಲ್ಲಿ ನಡೆದ ಅಖಿಲ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್‍ದ ಅಖಂಡ 75 ವರ್ಷಗಳ ಸಾರ್ಥಕ ಸೇವೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ, ವಸುಂದರಾ ಮನೋಹರ ಐನಾಪುರ ಅವರನ್ನು ಸನ್ಮಾನಿಸಲಾಯಿತು. 

ಬ್ಯಾಂಕಿನ ಕೇಂದ್ರ ಸಮಿತಿಗೆ ಪ್ರಥಮ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ನಡೆಯಿತು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೆಡರೇಶನ್ ಹಾಗೂ ಎನ್ ಸಿ ಬಿ ಇ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಬಂದ್ಲ್ಲಿಷ್, ಚಂದೀಗಡ ಮತ್ತು ಕರ್ನಾಟಕ ರಾಜ್ಯದ ಎಸ್ ಬಿ ಎಸ್ ಯು ಅಧ್ಯಕ್ಷ ಬಿ. ಎಸ್. ಸನ್ಮಾನಿಸಿದರು.  ಈ ಅದ್ದೂರಿ ಕಾರ್ಯಕ್ರಮದಲ್ಲಿ ನಟೇಶ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೀಫ್ ಜನರಲ್ ಮ್ಯಾನೇಜರ್ ನಂದಕಿಶೋರ ಶರ್ಮಾ, ದೇಶದ ಎಲ್ಲಾ ರಾಜ್ಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 2000ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೋಂಡಿದ್ದರು.

ಹೊಸ ಪೋಸ್ಟ್‌