Increase Voting: ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಜಾಗೃತಿ ಮೂಡಿಸಿ- ಪಿ. ಎಸ್. ವಸ್ತ್ರದ

ವಿಜಯಪುರ: 18 ರಿಂದ 20 ವರ್ಷದೊಳಗಿನ ನವ ಮತದಾರರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು  ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ. ಎಸ್. ವಸ್ತ್ರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ವಿಜಯಪುರ ಜಿ. ಪಂ. ಸಭಾಂಗಣದಲ್ಲಿ ನಡೆದ ಸ್ವೀಪ್ ಹಾಗೂ ಇಎಲ್‍ಸಿ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮತದಾನ ಕೇಂದ್ರಕ್ಕೆ ಅಗತ್ಯವಾಗಿ […]

Wheelchair Cricket: ಬಸವ ನಾಡಿನ ಸಾಗರ ಲಮಾಣಿ ವ್ಹೀಲ್ ಚೇರ್ ಕ್ರಿಕೇಟ್ ಭಾರತ ಎ ತಂಡಕ್ಕೆ ಆಯ್ಕೆ

ವಿಜಯಪುರ: ಡಿಡಿಸಿಐ ಮತ್ತು ಬಿಗ್ ಬ್ಯಾಶ್ ಸ್ಪೋರ್ಟ್ ಲೀಗ್ ಆಯೋಜಿಸುತ್ತಿರುವ ಸರ್ದಾರ ಪಟೇಲ್ ಯುನಿಟಿ ಕಪ್ ಟಿ-20 ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯ ಭಾರತ ಎ ತಂಡಕ್ಕೆ ಬಸವ ನಾಡು ವಿಜಯಪುರದ ಕ್ರೀಡಾಪಟು ಆಯ್ಕೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಎಲ್. ಟಿ. ಗ್ರಾಮದ ಸಾಗರ ಲಮಾಣಿ ಈ ಟೂರ್ನಿಗೆ ಆಯ್ಕೆಯಾಗಿದ್ದಾರೆ.  ಈ ಟೂರ್ನಿ ಗುಜರಾತಿನ ಸೂರತ್ ನ ಎನ್. ಕೆ. ಕ್ರಿಕೇಟ್ ಗ್ರೌಂಡಿನಲ್ಲಿ ಅ. 28 ರಿಂದ ಅ. 30ರ ವರೆಗೆ ಈ […]