Wheelchair Cricket: ಬಸವ ನಾಡಿನ ಸಾಗರ ಲಮಾಣಿ ವ್ಹೀಲ್ ಚೇರ್ ಕ್ರಿಕೇಟ್ ಭಾರತ ಎ ತಂಡಕ್ಕೆ ಆಯ್ಕೆ

ವಿಜಯಪುರ: ಡಿಡಿಸಿಐ ಮತ್ತು ಬಿಗ್ ಬ್ಯಾಶ್ ಸ್ಪೋರ್ಟ್ ಲೀಗ್ ಆಯೋಜಿಸುತ್ತಿರುವ ಸರ್ದಾರ ಪಟೇಲ್ ಯುನಿಟಿ ಕಪ್ ಟಿ-20 ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯ ಭಾರತ ಎ ತಂಡಕ್ಕೆ ಬಸವ ನಾಡು ವಿಜಯಪುರದ ಕ್ರೀಡಾಪಟು ಆಯ್ಕೆಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಎಲ್. ಟಿ. ಗ್ರಾಮದ ಸಾಗರ ಲಮಾಣಿ ಈ ಟೂರ್ನಿಗೆ ಆಯ್ಕೆಯಾಗಿದ್ದಾರೆ.  ಈ ಟೂರ್ನಿ ಗುಜರಾತಿನ ಸೂರತ್ ನ ಎನ್. ಕೆ. ಕ್ರಿಕೇಟ್ ಗ್ರೌಂಡಿನಲ್ಲಿ ಅ. 28 ರಿಂದ ಅ. 30ರ ವರೆಗೆ ಈ ಪಂದ್ಯಾವಳಿ ನಡೆಯಲಿದೆ.

ಸಾಗರ ಲಮಾಣಿ ಅವರಿಗೆ ಮುರಳಿ ಬೀಳಗಿ, ರಾಜೇಶ ತೊರವಿ ಬಿಜಾಪುರ ಬುಲ್ಸ್ ಮ್ಯಾನೇಜರ್, ಮತ್ತು ದರ್ಶನ ದಿವ್ಯಾಂಗ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿಯ ಮುಖ್ಯ ಕೋಚಿಂಗ್ ನೀಡಿದ್ದಾರೆ.

ದಿವ್ಯಾಂಗ್ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿಯ ಬ್ಯಾಕ್ ಬೋನ್ ದಿಲೀಪ ಕುಮಾರಗೌಡ, ನೇಮಿಶ ಆಚಾರ್ಯ, ಪರಶುರಾಮ ಗುನ್ನಾಪುರ, ವಿನೋದ ಖೇಡ, ರಾಜಕುಮಾರ ಲಮಾಣಿ (ಗನ್ ಮ್ಯಾನ್) ಅನಿಲಕುಮಾರ ಚವ್ಹಾಣ, ಮಾಜಿ ಸೈನಿಕರು, ಡಾ. ಬಸವರಾಜ ಚವ್ಹಾಣ, ಕಸ್ತೂರಿಬಾಯಿ ಚವ್ಹಾಣ, ನರಸಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಹಾಂತೇಶ ಚಲವಾದಿ, ಸುನೀಲ ರಾಠೋಡ, ದೇವೇಂದ್ರ ಗೋನಾಳ, ಶಿವಾನಂದ ಚವ್ಹಾಣ ಸೇರಿದಂತೆ ಎಲ್ಲ ಸಮಾಜದ ಮುಖಂಡರು ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌