Campaign Close: ಮಹಾನಗರ ಪಾಲಿಕೆ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ- ನಾನಾ ಬಡಾವಣೆಗಳಲ್ಲಿ ಪ್ರಚಾರ ನಡೆಸಿದ ಅಭ್ಯರ್ಥಿಗಳು

ವಿಜಯಪುರ: ಅ. 28ರಂದು ಶುಕ್ರವಾರ ನಡೆಯಲಿರುವ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಬಹಿರಂಗ ಪ್ರಚಾರ ಸಂಜೆ ಅಂಕೊಂಡಿದೆ.

ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಮುಂಚೆ ನಾನಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಂತಮ್ಮ ವಾರ್ಡುಗಳಲ್ಲಿ ಬಹಿರಂಗ ಪ್ರಚಾರ ನಡೆಸಿದರು.

ವಿಜಯಪುರ ನಗರದ ವಾರ್ಡ್ ಸಂಖ್ಯೆ 32 ರಲ್ಲಿ ಪಕ್ಷೇತರ ಅಭ್ಯರ್ಥಿ ಹೇರಲಗಿ ಸಂಗಪ್ಪ ಬಸವರಾಜ ತಮ್ಮ ವಾರ್ಡ್ ವ್ಯಾಪ್ತಿಯ ಲಿಂಗೇಶ್ವರ ಗುಡಿ ಹತ್ತಿರ, ನವಿ ಗಲ್ಲಿ, ಬಣಗಾರ ಗಲ್ಲಿ, ಹಿರೇಮಠ ಗಲ್ಲಿ, ಕೊಪ್ಪದ ಗಲ್ಲಿ, ಸಾಣಿಕನವರ ಒಣಿ, ಕಬಾಡೆ ಓಣಿ ಸೇರಿದಂತೆ ನಾನಾ ಕಡೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ವಾ. ಸಂ. 22ರ ಪಕ್ಷೇತರ ಅಭ್ಯರ್ಥಿ ರವಿಕಾಂತ ಬಗಲಿ ಪ್ರಚಾರ ಕೈಗೊಂಡರು

ಮತ್ತೊಂದೆಡೆ ವಾರ್ಡ್ ಸಂಖ್ಯೆ 22 ರಲ್ಲಿ ಪಕ್ಷೇತರ ಅಭ್ಯರ್ಥಿ ರವಿಕಾಂತ ಬಗಲಿ ಕೂಡ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು. ಜಲನಗರ ವಿವೇಕನಗರ, ಎಸ್. ಆರ್. ಕಾಲನಿ, ಕನಕದಾಸ ಬಡಾವಣೆ ಸೇರಿದಂತೆ ನಾನಾ ಕಡೆ ಬಿರುಸಿನ ಪ್ರಚಾರ ಕೈಗೊಂಡರು.

ಈ ಮಧ್ಯೆ ಇದೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಕೂಡ ತಮ್ಮ ಬೆಂಬಲಿಗರೊಂದಿಗೆ ನಾನಾ ಬಡಾವಣೆಗಳಲ್ಲಿ ತೆರಳಿ ಮತಯಾಚಿಸಿದರು.

ಅ. 28 ರಂದು ಶುಕ್ರವಾರ ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡುಗಳಿಗೆ ಬೆ. 7 ರಿಂದ ಸಂ. 5ರ ವರೆಗೆ ಮತದಾನ ನಡೆಯಲಿದೆ.

Leave a Reply

ಹೊಸ ಪೋಸ್ಟ್‌