ವಿಜಯಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪತ್ರಕರ್ತರಾದ ಪ್ರದೀಪ ಕುಲಕರ್ಣಿ, ಸಚ್ಚೆಂದ್ರ ಲಂಬು, ಕ್ರಿಕೆಟ್ ಆಟಗಾರ್ತಿ ಅನ್ನಪೂರ್ಣ ಭೋಸಲೆ ಸೇರಿದಂತೆ ಒಟ್ಟು 20 ಜನರಿಗೆ ಈ ಬಾರಿ ಪ್ರಶಸ್ತಿ ಪ್ರಕಟಿಸಲಾಗಿದೆ.
ಮಂಗಳವಾರ ನಗರದಲ್ಲಿರುವ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಾನಾ ಜನಪ್ರತಿನಿಧಿಗಳು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ನಾನಾ ಕ್ಷೇತ್ರಗಳ ಪ್ರಶಸ್ತಿ ಪುರಸ್ಕೃತರು, ಅವರ ಊರುಗಳ ಮಾಹಿತಿ ಇಲ್ಲಿದೆ ಹೆಸರುಗಳು ಇಲ್ಲಿವೆ
ಸಾಹಿತ್ಯ
- ವಿವೇಕಾನಂದ ಕಾಸಪ್ಪ ಕಲ್ಯಾಣಶೆಟ್ಟಿ- ಹಂಗರಗಿ
- ಚಂದ್ರಕಾಂತ ಬಿಜ್ಜರಗಿ- ವಿಜಯಪುರ
ಸಮಾಜ ಸೇವೆ
- ಮಳಸಿದ್ದಪ್ಪ ನಾಯ್ಕೋಡಿ- ವಿಜಯಪುರ
- ನಿತೀನ ರುಣವಾಲ- ವಿಜಯಪುರ
ಸಂಗೀತ
- ವೀಣಾ ಕೃ ಥಿಟೆ- ವಿಜಯಪುರ
- ಪ್ರಕಾಶಸಿಂಗ್ ರಜಪೂತ- ವಿಜಯಪುರ
ಜಾನಪದ
- ಅಂಬಣ್ಣ ಲಕ್ಷ್ಮಣ ತಳವಾರ- ಮದರಿ
- ನಾಗಲಿಂಗಪ್ಪ ಕಂಬಾರ- ಬಯಲಾಟ- ಪೀರಾಪೂರ
- ಶಾಂತಪ್ಪ ಮಲ್ಲಪ್ಪ ಕೋಟಿ- ಸಾರವಾಡ
- ಅಪ್ಪಾಸಾಬ ಹ. ಕನ್ನೂರ- ನಿಡೋಣಿ
ಚಿತ್ರಕಲೆ
- ಬಾಲಚಂದ್ರ ಶಿವಪ್ಪ ಬೆಕಿನಾಳ- ಬಸವನ ಬಾಗೇವಾಡಿ
- ವಿದ್ಯಾಧರ ಸಾಲಿ- ವಿಜಯಪುರ
ಶಿಕ್ಷಣ
- ಡಾ. ಮಹಾಂತೇಶ ಸಂಗಪ್ಪ ಗುಬ್ಬೇವಾಡ- ವಿಜಯಪುರ
ಪತ್ರಿಕೋದ್ಯಮ
- ಸಚೇಂದ್ರ ವೈ. ಲಂಬು- ತೊರವಿ
- ಪ್ರದೀಪ ಅಣ್ಣಾಜಿ ಕುಲಕರ್ಣಿ- ವಿಜಯಪುರ
ಕ್ರೀಡೆ
- ವಿನಾಯಕ ಸದಾಶಿವ ಗುನ್ನಾಪುರ- ವಿಜಯಪುರ
- ಅನ್ನಪೂರ್ಣ ಜಿ. ಬೋಸಲೆ- ವಿಜಯಪುರ
ಸಂಕೀರ್ಣ
- ರಾಜಯೋಗಿ ಬ್ರಹ್ಮಕುಮಾರ ಗಂಗಾಧರ ಅಣ್ಣನವರು- ವಿಜಯಪುರ
- ಫಾ. ಟಿಯೋಲ್ ಮಚಾದೊ- ವಿಜಯಪುರ
- ವಿ. ಸಿ. ನಾಗಠಾಣ- ವಿಜಯಪುರ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಆಯ್ಕೆಯಾಗಿರುವವರು ಸಂತಸ ವ್ಯಕ್ತಪಡಿಸಿದ್ದಾರೆ.