BJP Felicitation: ಕಾರ್ಮಿಕರಿಗೆ ಸನ್ಮಾನಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ವಿಜಯೋತ್ಸವ ಆಚರಿಸಿದ ಕಾರಜೋಳ ಸಹೋದರರು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆದು ವಾರ್ಡುಗಳಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ.  ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಕಾರಜೋಳ ಸಹೋದದರು ಈ ವಿಜಯೋತ್ಸವನ್ನು ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿನೂತನವಾಗಿ ಆಚರಿಸಿದ್ದಾರೆ. 

ಬಿಜೆಪಿ ಮುಖಂಡ ಡಾ. ಗೋಪಾಲಕಾರಜೋಳ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ವಿಜಯಿ ಅಭ್ಯರ್ಥಿಗಳಾದ ರಶ್ಮಿ ಬಸವರಾಜ ಕೋರಿ, ಸುನಂದಾ ಸಂಗೋಂಡಪ್ಪ ಕುಮಸಿ ಮತ್ತು ಸ್ವಪ್ನಾ ಸುರೇಶ ಕಣಮುಚನಾಳ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಬಿಜೆಪಿ ಜನಪರವಾಗಿದೆ ಎಂಬುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ.  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಮರ್ಥ ಆಡಳಿತದಿಂದ ಜನತೆ ಬಿಜೆಪಿಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.

ಗೋಪಾಲ ಕಾರಜೋಳ, ಉಮೇಶ ಕಾರಜೋಳ ನೇತೃತ್ವದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು

ಈ ವಿಜಯೋತ್ಸವವನ್ನು ಕಾಯಕ ಜೀವಿಗಳಾದ ಪೌರ ಕಾರ್ಮಿಕ ಬಂಧುಗಳ ಸಮ್ಮುಖದಲ್ಲಿ ಆಚರಿಸುವ ಮೂಲಕ ವಿನೂತನವಾಗಿ ಸಂಭ್ರಮಮಾಚರಣೆ ಮಾಡಲಾಗುತ್ತಿದೆ ಎಂದು ಉಮೇಶ ಕಾರಜೋಳ ಹೇಳಿದರು.

ಈ ಸಂದರ್ಬದಲ್ಲಿ ಜಿ. ಪಂ. ಮಾಜಿ ಸದಸ್ಯ ನವೀನ ಅರಕೇರಿ, ಬಿಜೆಪಿ ಮುಖಂಡರಾದ ರಾಜುಗೌಡ ಪಾಟೀಲ, ಈಶ್ವರ ಶಿವೂರ ಶ್ರೀಶೈಲ ಕಣಮುಚನಾಳ, ಕುಮಾರ ಕಟ್ಟಿಮನಿ, ರವಿ ಮುಕಾರ್ತಿಹಾಳ ಅನೀಲ ಬಿರಾದಾರ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌