Ibrahimpur RoB: ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಕಾಮಗಾರಿ- ನವೆಂಬರ ಮಾಸಾಂತ್ಯದೊಳಗೆ ಪೂರ್ಣಗೊಳಿಸಲು ಡಿಸಿ ಸೂಚನೆ

ವಿಜಯಪುರ: ನಗರದಲ್ಲಿ ಇಬ್ರಾಹಿಂಪೂರ ಬಳಿ ನಡೆಯುತ್ತಿರುವ ರೇಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ನವೆಂಬರ ಮಾಸಾಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಇಬ್ರಾಹಿಂಪುರ ರೇಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 36 ಮೀಟರ್ ಸ್ಪ್ಯಾನ್, ಬೊಸ್ಟರಿಂಗ್ ಸ್ಟೀಲ್ ಗ್ರೈಡರ್, ಮೂವಮೇಂಟ್, ಪ್ಲೇಸಮೆಂಟ್ ಆನ್ ಬೇರಿಂಗ್ಸ್, ಮೇಲ್ಗಡೆ ಎರಡು ಬದಿಯಲ್ಲಿ ಕಾಂಕ್ರೀಟ್ ಹಾಕುವುದು(ಕಾಂಕ್ರಿಟಿಂಗ್ ಆನ್ ಗರ್ಡರ್), ಪಾದಚಾರಿ ಮಾರ್ಗ, ಮ್ಯಾಟಿಕ್ ಆಸ್ಪಾಟಿಂಗ್, ಗಣೇಶನಗರ ಹಾಗೂ  ನಗರ (ಬಿಡಿಎ) ಕಡೆಯಿಂದ ಇಬ್ರಾಹಿಂಪುರ ಹೋಗುವ ಮಾರ್ಗ) ಎರಡು ಭಾಗದಲ್ಲಿ ಬಿಟಿ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಿ ನವೆಂಬರ ಅಂತ್ಯದೊಳಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು.  ಯಾವುದೇ ನೆಪವೊಡ್ಡದೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.

ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ವಿಜಯಪುರ ಡಿಸಿ, ಎಸ್ಪಿ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು

 

ಕಳೆದ ಕೆಲವು ದಿನಗಳ ಹಿಂದೆ ನಿರಂತರವಾಗಿ ಮಳೆ ಬಂದ ಕಾರಣ ವೆಲ್ಡಿಂಗ್ ಹಾಗೂ ಇತರೆ   ಕಾಮಗಾರಿಯಲ್ಲಿ ಅಡಚಣೆ ಉಂಟಾಗಿ ಒಂದು ತಿಂಗಳು ಕಾಮಗಾರಿ ವಿಳಂಬವಾಗಿದ್ದು, ನವೆಂಬರ್ ಅಂತ್ಯದೊಳದಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸ್ಥಳದಲ್ಲಿ ಉಪಸ್ಥಿತರಿ್ದದ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್ಪಿ ಎಚ್. ಡಿ. ಆನಂದಕುಮಾರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ರೇಲ್ವೆಯ ಚೀಫ್ ಸಬ್ ಎಂಜಿನಿಯರ್ ಸಿ. ಪಿ. ರೆಡ್ಡಿ, ಎಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೋಮನಾಥ್, ಗುತ್ತಿಗೆದಾರ ವೆಂಕಟರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌