Corporators CM Meet: ಯತ್ನಾಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ ವಿಜಯಪುರ ಪಾಲಿಕೆ ಬಿಜೆಪಿ ಕಾರ್ಪೋರೇಟರ್ ಗಳು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿ ನೂತನ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ತೆರಳಿದ ಸದಸ್ಯರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು‌.  ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ ಸದಸ್ಯರು ಕೃತಜ್ಞತೆ ಸಲ್ಲಿಸಿದರು. ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಅತೀ ಹೆಚ್ಚು ಸದಸ್ಯರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯತ್ನಾಳ ಸೂಚನೆಯಂತೆ ಬಿಜೆಪಿ ಸದಸ್ಯರು […]

Bank Elected: ಹನುಮಂತನ ಪೂಜಾರಿಗೆ ಒಲಿದ ಮಹಾಲಕ್ಷ್ನಿ- ಬ್ಯಾಂಕ್ ಉಪಾಧ್ಯಕ್ಷೆಯಾಗಿ ಅರ್ಚರ ಮನೆಗೆ ಶೋಭೆ ತಂದ ಗೃಹಿಣಿ

ವಿಜಯಪುರ: ನಗರದ ಐತಿಹಾಸಿಕ ಮದಲಾ ಮಾರುತಿ ದೇವಸ್ಥಾನದ ಪೂಜಾರಿಯ ಪತ್ನಿಗೆ ವಿಜಯಪುರದ ಪ್ರತಿಷ್ಠಿತ ಮಹಾಲಕ್ಷ್ಮಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಶ್ರೀ ಮಹಾಲಕ್ಷ್ಮಿ ಬ್ಯಾಂಕಿನ ಅಧ್ಯಕ್ಷರಾಗಿ ಮುಕುಂದ ಕುಲಕರ್ಣಿ ಅಧ್ಯಕ್ಷರಾಗಿ ಮತ್ತು ಶೋಭಾ ಗೋವಿಂದ ಜೋಶಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ್ಯಾಯವಾದಿಯೂ ಆಗಿರುವ ಗೋವಿಂದ ಜೋಶಿ ಕಳೆದ ಹಲವಾರು ವರ್ಷಗಳಿಂದ ವಿಜಯಪುರ ನಗರದ ಐತಿಹಾಸಿಕ ಮಧಲಾ ಮಾರುತಿ ದೇವಸ್ಥಾನದ ಅರ್ಚಕರಾಗಿ ಹಣಮಂತನ ಪೂಜೆ, ಯಜ್ಞ-ಯಾಗಾದಿಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಗೋವಿಂದ ಜೋಶಿ […]