Bank Elected: ಹನುಮಂತನ ಪೂಜಾರಿಗೆ ಒಲಿದ ಮಹಾಲಕ್ಷ್ನಿ- ಬ್ಯಾಂಕ್ ಉಪಾಧ್ಯಕ್ಷೆಯಾಗಿ ಅರ್ಚರ ಮನೆಗೆ ಶೋಭೆ ತಂದ ಗೃಹಿಣಿ

ವಿಜಯಪುರ: ನಗರದ ಐತಿಹಾಸಿಕ ಮದಲಾ ಮಾರುತಿ ದೇವಸ್ಥಾನದ ಪೂಜಾರಿಯ ಪತ್ನಿಗೆ ವಿಜಯಪುರದ ಪ್ರತಿಷ್ಠಿತ ಮಹಾಲಕ್ಷ್ಮಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಶ್ರೀ ಮಹಾಲಕ್ಷ್ಮಿ ಬ್ಯಾಂಕಿನ ಅಧ್ಯಕ್ಷರಾಗಿ ಮುಕುಂದ ಕುಲಕರ್ಣಿ ಅಧ್ಯಕ್ಷರಾಗಿ ಮತ್ತು ಶೋಭಾ ಗೋವಿಂದ ಜೋಶಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿದ ಗೌರವಿಸಿದ ಗೋವಿಂ

ನ್ಯಾಯವಾದಿಯೂ ಆಗಿರುವ ಗೋವಿಂದ ಜೋಶಿ ಕಳೆದ ಹಲವಾರು ವರ್ಷಗಳಿಂದ ವಿಜಯಪುರ ನಗರದ ಐತಿಹಾಸಿಕ ಮಧಲಾ ಮಾರುತಿ ದೇವಸ್ಥಾನದ ಅರ್ಚಕರಾಗಿ ಹಣಮಂತನ ಪೂಜೆ, ಯಜ್ಞ-ಯಾಗಾದಿಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಈಗ ಗೋವಿಂದ ಜೋಶಿ ಅವರ ಪತ್ನಿ ಶೋಭಾ ಗೋವಿಂದ ಜೋಶಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 

ಪತ್ನಿಯ ಆಯ್ಕೆಯ ಕುರಿತು ಗೋವಿಂದ ಜೋಶಿ ಸಂತಸ ವ್ಯಕ್ತಪಡಿಸಿದ್ದು, ಇದಕ್ಕೆ ಬ್ಯಾಂಕಿನ ನಿರ್ದೇಶಕರ ಸಹಕಾರ ಮತ್ತು ತಾವು ನಂಬಿರುವ ಮಧಲಾ ಮಾರುತಿ ದೇವರ ಆಶೀರ್ವಾದವೇ ಕಾರಣ ಎಂದು ಬಸವ ನಾಡು ವೆಬ್ ಗೆ ದೂರವಾಣಿ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌