Vijayendra Birthday: ಬಿ. ವೈ. ವಿಜಯೇಂದ್ರ ಜನ್ಮದಿನ: ಬಸವ ನಾಡಿನಲ್ಲಿ ವಿಶೇಷ ಪೂಜೆ- ವಿಜಯೇಂದ್ರ ಸಿಎಂ ಆಗಲಿ ಎಂದು ಪ್ರಾರ್ಥಿಸಿದ ಬೆಂಬಲಿಗರು

ವಿಜಯಪುರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ಜನ್ಮದಿನದ ಅಂಗವಾಗಿ ಬಸವ ನಾಡು ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಕೃಷ್ಣಾ ಕಾಡಾ ನಿರ್ದೇಶಕ ರವಿ ಖಾನಾಪುರ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.  ಅಲ್ಲದೇ, ಕ್ಷೀರ ಹಂಚಿಕೆ ಮಾಡಿದರು.  ವಿಜಯೇಂದ್ರ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಹೆಚ್ಚಿನ ಸಾಮಾಜಿಕ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಬಸವ ನಾಡಿನಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಬಿ. ವೈ. ವಿಜಯೇಂದ್ರ ಜನ್ಮದಿನ ಆಚರಿಸಿದ ಬಿಜೆಪಿ ಮುಖಂಡರು

ಈ ಸಂದರ್ಭದಲ್ಲಿ ಮಾತನಾಡಿದ ರವಿ ಖಾನಾಪೂರ, ಮುಂಬರುವ ದಿನಗಳಲ್ಲಿ ಬಿ. ವೈ. ವಿಜಯೇಂದ್ರ ಒಳ್ಳೆಯದಾಗಲಿ.  ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ.  ಸಂಘಟನೆ ಕಲೆಗಳನ್ನ ಅರಿತಿರುವ ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿದೆ.  ಈ ರಾಜ್ಯದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸಾಮಾಜಿಕ ಚಿಂತನೆ ಮಾಡಿ ಜನಮನ್ನಣೆ ಗಳಿಸಿರುವ ಬಿ. ಎಸ್. ಯಡಿಯೂರಪ್ಪ ಅವರಂತೆ ವಿಜಯೇಂದ್ರ ಅವರೂ ಕೂಡ ತಮ್ಮ ತಂದೆಯ ಹಾದಿಯಲ್ಲಿ ಸಾಗಿ ಜನಪ್ರೀಯತೆಯನ್ನು ಗಳಿಸುತ್ತಿದಾರೆ ಎಂದು ಹೇಳಿದರು.

ಮಾಜಿ ಕಾರ್ಪೋರೇಟರ್ ಮತ್ತು ರಾಮನವಮಿ ಉತ್ಸವ ಸಮೀತಿ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ವಿಜಯೇಂದ್ರ ಅವರು ಈ ನಾಡಿನ ಭವಿಷ್ಯ.  ಅವರು ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.

ಯುವ ಮುಖಂಡರಾದ ಶಿವಾನಂದ ಭುಯ್ಯಾರ ಸೇರಿದಂತೆ ಹಲವಾರು ಜನ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಛಿತರಿದ್ದರು.

Leave a Reply

ಹೊಸ ಪೋಸ್ಟ್‌