AP Group: ಎಪಿ ಗ್ರುಪ್ ವತಿಯಿಂದ ಬಿ. ವೈ. ವಿಜಯೇಂದ್ರ ಜನ್ಮದಿನ ಆಚರಣೆ

ವಿಜಯಪುರ: ಎಪಿ ಗ್ರುಪ್ ವತಿಯಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಜನ್ಮದಿನವನ್ನು ಬಸವ ನಾಡು ವಿಜಯಪುರದಲ್ಲಿ ಆಚರಿಸಲಾಯಿತು.

ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಇರುವ ಹನುಮಂತ ದೇವರ ದೇವಸ್ಥಾನದಲ್ಲಿ ಎಪಿ ಗ್ರುಪ್ ಅಧ್ಯಕ್ಷ ಮತ್ತು ವಿಜಯಪುರ ನಗರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಈರಣ್ಣ ಪಟ್ಟಣಶೆಟ್ಟಿ, ರಾಜ್ಯದ ಜನಪ್ರೀಯ ಮತ್ತು ಯುವಕರ ಕಣ್ಮಣಿ ನಾಯಕಾರಿಗಿರುವ ಬಿ. ವೈ. ವಿಜಯೇಂದ್ರ ಅವರಿಗೆ ದೇವರು ಉತ್ತಮ ಆರೋಗ್ಯ, ಆಯುಷ್ಯ ನೀಡಲಿ.  ರಾಜಕೀಯ ಜೀವನದಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಶುಭ ಕೋರಿದರು.

ಎಪಿ ಗ್ರುಪ್ ವತಿಯಿಂದ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಮುಖಂಡರಾದ ಬಾಬು ಜಗದಾಳೆ, ಸಚಿನ ಅಡಕಿ, ಆನಂದ ಮುಚ್ಛಂಡಿ, ಸದಾಶಿವ ಚಲವಾದಿ, ವೀರೇಶ ಮದನಶೆಟ್ಟಿ, ಗಣೇಶ ಹಜೇರಿ, ನಿಖಿಲ ಬಾಗೇವಾಡಿ, ಗುರು ಗೋಲಗೇರಿ, ಶಿವರಾಜ, ಲಖನ ಅರ್ದಾವೂರ, ಕೃಷ್ಣ ಮಯಾಚಾರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌