ವಿಜಯಪುರ: ಮಹಾನಗರ ಪಾಲಿಕೆಗೆ ಆಯ್ಕೆಯಾದ ನೂತನ ಸದಸ್ಯರನ್ನು ಸುವಿಧಾ ಸಾಮಾಜಿಕ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ, ಲಯನ್ಸ್ ಕ್ಲಬ್ ಆಫ್ ವಿಜಯಪುರ ಪರಿವಾರಗಳ ಸಂಯುಕ್ತ ಆಶ್ರಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಸಯ್ಯದ ಫೈರೋಜ ಹುಸೇನಿ, ಶ್ರೀ ಶಂಭುಲಿಂಗ ಮಹಾರಾಜರು, ಸಂಗಮೇಶ ಶರಣರು, ಫಾ. ಟಿಯೋಲೋ ಮಚಾದೋ ಸಾನಿಧ್ಯ ವಹಿಸಿ ನೂತನ ಸದಸ್ಯರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಮಹಾನಗರ ಪಾಲಿಕೆಯ ನೂತನ ಸದಸ್ಯರಾದ ರಾಜು ಮಗಿಮಠ, ರಾಧಾಬಾಯಿ ದೇವಗಿರಿ, ಪ್ರೇಮಾನಂದ ಬಿರಾದಾರ, ಅಲ್ತಾಫ್ ಇಟಗಿ, ವಿಮಲಾ ರಫೀಕ್ ಕಾಣೆ, ಅಶೋಕ ನ್ಯಾಮಗೊಂಡ, ಕಿರಣ ಪಾಟೀಲ, ನಿಶಾತ್ ಹೈದರಅಲಿ ನದಾಫ, ದಿನೇಶ ಹಳ್ಳಿ, ರಾಜು ಜಾಧವ, ಆಸೀಫ್ ಶಾನವಾಲೆ, ಆರತಿ ಶಹಾಪುರ, ಶಾಯೀನ ಕುರೇಶಿ, ಅಪ್ಪು ಪೂಜಾರಿ, ಮಹಜಬೀನ ಅಬ್ದುಲರಜಾಕ ಹುರ್ತಿ, ಸೈದರ ಬಂದೇನವಾಜ್ ಬೀಳಗಿ, ಅಂಜುಮರ್ ಶಫೀಕ ಮನಗೂಳಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಸಂಗಮೇಶ ಬಬಲೇಶ್ವರ, ಅಥಣಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಸುನಿತಾ ಸಾಲಿಯಾನ, ಸುವಿಧಾ ಸಂಸ್ಥೆಯ ಅಧ್ಯಕ್ಷ ಫಯಾಜ್ ಕಲಾದಗಿ, ಶ್ರವಣಕುಮಾರ ಮಹೇಂದ್ರಕರ, ಎ. ಎ. ಜಾಗೀರದಾರ, ನಶೀಮ ರೋಜಿಂದಾರ, ಸಾಧಿಕ್ ಜಾನ್ವೇಕರ, ಐ. ಸಿ. ಪಠಾಣ, ಶಫೀಕ ಜಾಗೀರದಾರ, ಬಸವರಾಜ ಬಿ.ಕೆ, ಶಿವಾನಂದ ದುದ್ದಗಿ, ಸಂತೋಷ ಮುದೋಳ, ಪ್ರದೀಪ ಹಲಗುಣಕಿ, ಡಿ. ಎಸ್. ಪೀರಜಾದೆ, ಆಸೀಫ್ ಪೀರವಾಲೆ, ಲತೀಫ ಕಲಾದಗಿ, ಲಿಯಾಕತ್ ಕಲಾದಗಿ, ಹಾಸೀಂ ಕಲಾದಗಿ, ಸದ್ದಾಂ ಇನಾಂದಾರ ಡಾ. ಅಶೋಕ ಜಾಧವ, ಸುರೇಶ ಬಿಜಾಪುರ ಮುಂತಾದವರು ಉಪಸ್ಥಿತರಿದ್ದರು.