Bluerose Technology: ನೂತನ ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಗ್ರಾಮೀಣ ಸೇರಿದಂತೆ ಸಣ್ಣಪುಟ್ಟ ನಗರಗಳ ಮಕ್ಕಳಿಗೆ ಅನುಕೂಲವಾಗಲು ಬೆಂಗಳೂರಿನ ಬ್ಲೂರೋಸ್ ಟೆಕ್ನಾಲಜಿ ಬಸವ ನಾಡಿ ಮಕ್ಕಳಿಗೆ ತಂತ್ರಜ್ಞಾನ ಪರಿಚಯಿಸಿದೆ.  ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ. ವಿಜಯಪುರ ನಗರದ ಹೊರವಲಯದಲ್ಲಿ ಶಶಿನಾಗ ಹೋಟೆಲ್ ಬಳಿ ರೂಪಾದೇವಿ ಸಿ ಬಿ ಎಸ್ ಇ ಶಾಲೆಯಲ್ಲಿ  ಬ್ಲೂ ರೇಸ್ ಟೆಕ್ನಾಲಜಿ ಆಯೋಜಿಸಿದ್ದ ಇ-ಟೆಕ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇ-ಟೆಕ್ ಇಂಡಿಯಾ ಆನ್‍ಲೈನ್ ಕ್ಲಾಸ್ ಮೂಲಕ […]

Flagship Event: ಬಸವ ನಾಡಿನಲ್ಲಿ ನ. 20, 21ರಂದ ಮೊದಲ ಬಾರಿಗೆ ಉಕ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಐಇಇಇ(ಇನಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್) ಫ್ಲ್ಯಾಗಶಿಪ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ. 20 ಮತ್ತು 21ರಂದು ನಡೆಯಲಿದೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಂಶೋಧನಾ ವಿಜ್ಞಾನಿಗಳು, ಎಂಜಿನಿಯರ್ಸ್‍ಗಳು ಮತ್ತು ಸಂಶೋಧನೆಕಾರರಿಗೆ ಅವರ ಇತ್ತೀಚಿನ ಸಂಶೋಧನೆ […]