Bluerose Technology: ನೂತನ ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಗ್ರಾಮೀಣ ಸೇರಿದಂತೆ ಸಣ್ಣಪುಟ್ಟ ನಗರಗಳ ಮಕ್ಕಳಿಗೆ ಅನುಕೂಲವಾಗಲು ಬೆಂಗಳೂರಿನ ಬ್ಲೂರೋಸ್ ಟೆಕ್ನಾಲಜಿ ಬಸವ ನಾಡಿ ಮಕ್ಕಳಿಗೆ ತಂತ್ರಜ್ಞಾನ ಪರಿಚಯಿಸಿದೆ.  ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ.

ವಿಜಯಪುರ ನಗರದ ಹೊರವಲಯದಲ್ಲಿ ಶಶಿನಾಗ ಹೋಟೆಲ್ ಬಳಿ ರೂಪಾದೇವಿ ಸಿ ಬಿ ಎಸ್ ಇ ಶಾಲೆಯಲ್ಲಿ  ಬ್ಲೂ ರೇಸ್ ಟೆಕ್ನಾಲಜಿ ಆಯೋಜಿಸಿದ್ದ ಇ-ಟೆಕ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇ-ಟೆಕ್ ಇಂಡಿಯಾ ಆನ್‍ಲೈನ್ ಕ್ಲಾಸ್ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ಕøಷ್ಟ-ಗುಣಮಟ್ಟದ ಶಿಕ್ಷಣ ಒದಗಿಸುವ ತಂತ್ರಜ್ಞಾನವಾಗಿದ್ದು, ಎಂಟು ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕರ್ನಾಟಕ ಮಾಧ್ಯಮಿಕ ಶಿಕ್ಷಣದ ಪಠ್ಯಕ್ರಮದಂತೆ ಆನ್‍ಲೈನ್ ಮೂಲಕ ದಿನದ ಯಾವುದೇ ವೇಳೆಯಲ್ಲಿಯೂ ಸಹ ವಿದ್ಯಾರ್ಥಿಗಳು etechindia.com(ಇಟೆಕ್‍ಇಂಡಿಯಾ.ಕಾಂ) ನಲ್ಲಿ ನೋಂದಾಯಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ.  ಈ ಆನ್‍ಲೈನ್ ತಂತ್ರಜ್ಞಾನದಲ್ಲಿ ಚರ್ಚಾಕೂಗಳು, ರಸಪ್ರಶ್ನೆಗಳು ನಡೆಯುವುದರಿಂದ ಇಲ್ಲಿಯೂ ಸಹ ಮಕ್ಕಳು ಭಾಗವಹಿಸಬಹುದು.  ಈ ತಂತ್ರಜ್ಞಾನದಿಂದ ಅತ್ಯಂತ ಕಡಿಮೆ ಮಾಸಿಕ ದರದಲ್ಲಿ ಬಡ ವಿದ್ಯಾರ್ಥಿಗಳು ಗುಣಮಟ್ಟದ ಪಡೆಯುವಂತಾಗಲಿ ಎಂಬ ಸದುದ್ದೇಶದಿಂದ ಅಭಿವೃದ್ದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಬಸವ ನಾಡು ವಿಜಯಪುರ ಜಿಲ್ಲೆಯ ಎಲ್ಲ ಮಕ್ಕಳು ಈ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು.  ಕೌಶಲ್ಯಾಭಿವೃದ್ದಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಹ  ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಇಂಥ ಯೋಜನೆಗಳು ಇದಕ್ಕೆ ಪೂರಕವಾಗಿದ್ದು, ಈ ಆಧುನಿಕ ತಂತ್ರಜ್ಞಾನದ ಸದುಪಯೋಗ ಮಕ್ಕಳು ಪಡೆದುಕೊಳ್ಳಬೇಕು ರಮೇಶ ಜಿಗಜಿಣಗಿ ಹೇಳಿದರು.

ಬ್ಲೂರೋಸ್ ಟೆಕ್ನಾಲಜಿ ಸಂಸ್ಥಾಪಕ ತುಳಸಿದಾಸಪ್ಪ ಮಾತನಾಡಿ, ನಾನು ಗ್ರಾಮೀಣ ಪ್ರದೇಶದವನಾಗಿದ್ದು, ಗ್ರಾಮೀಣ, ಬಡ ಜನರ ಮಕ್ಕಳಿಗೆ ಏನನ್ನಾದರೂ ಮಾಡಬೇಕೆಂಬ ಆಸೆಯಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿರುವುದಾಗಿ ತಿಳಿಸಿದರು.

ಬೆಂಗಳೂರು, ಮುಂಬಯಿ ಸೇರಿದಂತೆ ಮಹಾನಗರಗಳಲ್ಲಿ ಹಲವು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.  ಆದರೆ, ಗ್ರಾಮೀಣ ಪ್ರದೇಶದ, ಸಣ್ಣ ನಗರಗಳ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜಯಪುರದ ರೂಪಾದೇವಿ ಸಿಬಿಎಸ್‍ಇ ಸ್ಕೂಲ್‍ದೊಂದಿಗೆ ಈ ತಂತ್ರಜ್ಞಾನ ಬಳಕೆ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.  ಇದನ್ನು ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ರೂಪಾದೇವಿ ಸಿಬಿಎಸ್‍ಇ ಸ್ಕೂಲ್ ಮತ್ತು ರೆಸಿಡೆನ್ಸಿಯಲ್ ಸಾಯಿನ್ಸ್ ಪಿಯು ಕಾಲೇಜ್ ಸಂಸ್ಥೆಯ ಚೇರಮನ್ ನರಸಮ್ಮ ಗೊಟ್ಯಾಳ ಹಾಗೂ ಜಟ್ಟೆಪ್ಪ ಬೋಳೆಗಾಂವ, ಬಿ. ಆರ್. ಚವ್ಹಾಣ, ಭೀಮಸೇನ ಕೋಕರೆ, ರವೀಂದ್ರ ಲೋಣಿ, ಎಸ್. ವಿ. ಮಂಜುನಾಥ, ಹೇಮಂತ, ಎಚ್. ಜಿ. ಮಿರ್ಜಿ, ಬ್ಲೂರೋಸ್ ಸಂಸ್ಥೆ ಹಾಗೂ ಕಾಲೇಜ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಲೇಜ್‍ನ ಹಿತಚಿಂಕ ಜಿ. ಕೆ. ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.  ರಾಜೇಂದ್ರ ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

ಹೊಸ ಪೋಸ್ಟ್‌