New ASP: ಶಂಕರ ಕಾಳಪ್ಪ ಮಾರಿಹಾಳ ವಿಜಯಪುರ ನೂತನ ಎಎಸ್ಪಿ

ವಿಜಯಪುರ: ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ನೂತನ ಎಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ. ಕೆಲವು ದಿನಗಳ ಹಿಂದೆ ಎಎಸ್ಪಿಯಾಗಿದ್ದ ಡಾ. ರಾಮ ಲಕ್ಷ್ನಣಸಾ ಅರಸಿದ್ದಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಖಾಲಿಯಿರುವ ಈ ಹುದ್ದೆಗೆ ಸರಕಾರ ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.

Hadagali Programme: ಹಡಗಲಿಯಲ್ಲಿ ಡಿಸಿ ನಡೆ ಹಳ್ಳಿಯ ಕಡೆ- ವಿಜಯಪುರ ತಹಸೀಲ್ದಾರ ಭಾಗಿ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ವಿಜಯಪುರ ತಹಸೀಲ್ದಾರ ಸಿದರಾಯ ಭೋಸಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾನಾ ಫಲಾನುಭವಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಇದಕ್ಕಿಂತಲೂ ಮೊದಲು ಅಧಿಕಾರಿಗಳನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಐ. ಎಚ್. ತುಂಬಗಿ, ಉಪತಹಸೀಲ್ದಾರ ಡಿ. ಬಿ. ಭೋವಿ, ಕಂದಾಯ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ನಾನಾ ಇಲಾಖೆಗಳ ಅಧಿಕಾರಿಗಳು, ಹಡಗಲಿ ಗ್ರಾ. ಪಂ. […]

Vegetables Day: ಪ್ರೇರಣಾ ಫನ್ ಸ್ಕೂಲ್ ನಲ್ಲಿ ತರಕಾರಿ ದಿನ ಆಚರಣೆ- ಸಂಭ್ರಮಿಸಿದ ಮಕ್ಕಳು

ವಿಜಯಪುರ: ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜೊತೆಗೆ ಸಾಮಾನ್ಯ ಜ್ಞಾನವೂ ಅಗತ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದ ಪ್ರೇರಣಾ ಸಂಸ್ಥೆಯ ಪ್ರೇರಣಾ ಫನ್ ಸ್ಕೂಲಿನಲ್ಲಿ ತರಕಾರಿ ದಿನ ಆಚರಿಸಲಾಯಿತು. ಶಾಲೆಯ ಎಲ್ಲ ಮಕ್ಕಳು ತರಹೇವಾರಿ ತರಕಾರಿಗಳನ್ನು ತೆಗೆದುಕೊಂಡು ಬಂದು ಹಾಗೂ ತರಕಾರಿ ಆಕೃತಿಯ ಚಿತ್ರಪಟಗಳ ಮೂಲಕ ತಾವೇ ಸ್ವತಃ ತರಕಾರಿಗಳಾಗಿ ಗಮನ ಸೆಳೆದರು.  ಶಾಲೆಯ ಸಂಸ್ಥಾಪಕ ಡಾ. ಅರವಿಂದ ವೆ. ಪಾಟೀಲ ಅವರ ಆಶಯದಂತೆ ಇಂದಿನ ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲದೆ ಶಿಕ್ಷಣದ […]

Vidyut Adalat: ದೇವಾಪುರ ಗ್ರಾಮದಲ್ಲಿ ವಿದ್ಯುತ್ ಲೋಕ್ ಅದಾಲತ್ ಕಾರ್ಯಕ್ರಮ

ವಿಜಯಪುರ: ಬಬಲೇಶ್ವರ ತಾಲೂಕಿನ ದೇವಾಪುರ ಗ್ರಾಮದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ನಡೆಯಿತು. ಹೆಸ್ಕಾಂ ಜಾಗೃತ ದಳದ ಎಇಇ ಗಂಗಾಧರ ಲೋಣಿ, ವಿದ್ಯುತ್ ಕಂಪನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಗ್ರಾಮದ ಯುವ ಮುಖಂಡ ಪ್ರಕಾಶ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ತಂತಿಗಳುಗಳು ಹಳೆಯದಾಗಿದ್ದು, ಬದಲಾಯಿಸಿ ಸಂಭವನೀಯ ವಿದ್ಯುತ್ ಅವಘಡಗಳನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಸ್ಕಾಂ ದೇವರ ಗೆಣ್ಣೂರ ಶಾಖಾದಿಕಾರಿ ಕಬಾಡೆ, ಸಂಗಮೇಶ ನಾಯ್ಕರ, ಮಳೆಪ್ಪ ಆಣಿ, […]

Corporator Help: ಪ್ರೇಮಾನಂದ ಬಿರಾದಾರ ಸಹಾಯ ಹಸ್ತ- ಥಾಯ್ಲೆಂಡ್ ಗೆ ತೆರಳಲು ಸಿದ್ಧಳಾದ ಸಿಸ್ಟೋಬಾಲ್ ಕ್ರೀಡಾಪಟು

ವಿಜಯಪುರ: ಪ್ರತಿಭೆಯಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿದೇಶದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತೆರಳಲು ಪರದಾಡುತ್ತಿದ್ದ ಯುವ ಆಟಗಾರ್ತಿಗೆ ಬಿಜೆಪಿ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರದ ಎಸ್. ಆರ್. ಕಾಲನಿಯ ನಿವಾಸಿ ಅಕ್ಷತಾ ತಾರಾಪುರ ನಗರದ ನವಬಾಗ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದ್ದಾರೆ. ಸಿಸ್ಟೋಬಾಲ್ ಆಟಗಾರ್ತಿಯಾಗಿರುವ ಈಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿರುವ ಅಕ್ಷತಾ ತಾರಾಪುರ ಥಾಯ್ಲೆಂಡ್ ದೇಶದ ಬ್ಯಾಂಕಾಕಿನಲ್ಲಿ ಡಿ.1 ರಿಂದ […]

BJP Puppet: ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಶೃಂಗಾರ ಗೊಂಬೆ, ಯತ್ನಾಳರ ಕೈಗೊಂಬೆ- ರವಿಕಾಂತ ಬಗಲಿ

ವಿಜಯಪುರ: ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಅವರು ಶೃಂಗಾರ ಗೊಂಬೆಯಂತಿಂದ್ದು ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಅವರ ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ಮುಖಂಡ ರವಿಕಾಂತ ಬಗಲಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಬಿಜೆಪಿಯಿಂದ ಉಚ್ಛಾಟಿತರಾದ ಎಂಟು ಜನ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಆರ್. ಎಸ್. ಪಾಟೀಲ ಕೂಚಬಾಳ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ […]

ಚಂದ್ರಕಾಂತ ಬಿಜ್ಜರಗಿ ರಚಿತ ಹಾಲುಮತ ಧರ್ಮಗ್ರಂಥ ಬಿಡುಗಡೆ

ವಿಜಯಪುರ: ಹಾಲುಮತ ಸಮಾಜದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಚಂದ್ರಕಾಂತ ಬಿಜ್ಜರಗಿ ಅವರು ರಚಿಸಿರುವ ಹಾಲುಮತ ಧರ್ಮಗ್ರಂಥ ಬಿಡಗಡೆ ಕಾರ್ಯಕ್ರಮ ಬಸವ ನಾಡು ವಿಜಯಪುರದಲ್ಲಿ ನಡೆಯಿತು. ತಿಂಥನಿ ಕಾಗಿನೆಲೆ ಶ್ರೀ ಸಿದ್ಧರಾಮಾನಂದ ಮಹಾಸ್ವಾಮೀಜಿ, ಮೈಸೂರಿನ ಶ್ರೀ ಶಿವಾನಂದ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಲುಮತದ ಜಡೆಸಿದ್ಧರು, ಕಾಗಿನೆಲೆ ಶಾಖಾಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ನಾಗಠಾಣ ಮೂಲಪೀಠದ ಮಾಳಿಂಗರಾಯ ಮಹಾರಾಜರು, ಪಟ್ಟದ ಗುರುಗಳು ಗ್ರಂಥ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗ್ರಂಥ ರಚಿಸಿದ ಚಂದ್ರಕಾಂತ ಬಿಜ್ಜರಗಿ ಅವರನ್ನೂ […]