Car Accident: ನಡುರಾತ್ರಿ ಹೋಟೇಲುಗಳಿಗೆ ನುಗ್ಗಿದ ಕಾರು- ಅದೃಷ್ಟವಶಾತ ತಪ್ಪಿದ ಪ್ರಾಣಹಾನಿ

ವಿಜಯಪುರ: ಮಧ್ಯರಾತ್ರಿ ಕಾರೊಂದು ರಸ್ತೆ ಬದಿಯ ಸುಮಾರು ಐದು ಹೋಟೇಲುಗಳಿಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಸಂಭವಿಸಿದೆ. ಈ ಗ್ರಾಮದ ರಸ್ತೆಯ ಬಳಿ ಸಾಲುಸಾಲಾಗಿ ಹೋಟೇಲುಗಳಿವೆ. ಮಧ್ಯರಾತ್ರಿ‌ ಚಾಲಕನ ನಿಯಂತ್ರಣ ತಪ್ಪಿ ಕಾರು ಒಂದಾದ ಮೇಲೋಂದರಂತೆ ಎರಡು ಹೋಟೇಲುಗಳಿಗೆ ನುಗ್ಗಿದ್ದು ಈ ಹೋಟೇಲುಗಳಲ್ಲಿದ್ದ ಪೀಠೋಪಕರಣಗಳು ಧ್ವಂಸವಾಗಿವೆ. ಆದರೆ, ಹೋಟೇಲುಗಳಲ್ಲಿದ್ದ ಜನರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯಪುರ ಮೂಲದ ಕಾರು ಮಹೀಂದ್ರಾ XUV KA28/M-9169 ನಂಬರ್ ನ ಮಹೀಂದ್ರಾ ಕಾರು ಇದಾಗಿದೆ. ಈ […]

KUWJ Conference: ಕಾನಿಪ‌ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ- ಹೋಟೇಲ್ ಅಸೋಸಿಯೇಷನ್

ವಿಜಯಪುರ : ನಗರದಲ್ಲಿ ನಡೆಯಲಿರುವ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾವು ಜಿಲ್ಲಾ ಕಾನಿಪ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಹೊಟೇಲ್ ಮತ್ತು ಬಾರ್ ಅಸೋಸಿಯೇಶನ್ ಚೇರಮನ್ ಪ್ರಕಾಶ ಶೆಟ್ಟಿ ಭರವಸೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ವಸತಿ ಸಮಿತಿಯ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ತಾವು ಕೂಡ ನಮ್ಮ ಅಸೋಶಿಯೇಶನ್ ಪದಾಧಿಕಾರಿಗಳೊಂದಿಗೆ ಈ ವಿಷಯ ಕುರಿತು ಸುದೀರ್ಘ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. […]