KUWJ Conference: ಕಾನಿಪ‌ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ- ಹೋಟೇಲ್ ಅಸೋಸಿಯೇಷನ್

ವಿಜಯಪುರ : ನಗರದಲ್ಲಿ ನಡೆಯಲಿರುವ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾವು ಜಿಲ್ಲಾ ಕಾನಿಪ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಹೊಟೇಲ್ ಮತ್ತು ಬಾರ್ ಅಸೋಸಿಯೇಶನ್ ಚೇರಮನ್ ಪ್ರಕಾಶ ಶೆಟ್ಟಿ ಭರವಸೆ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ವಸತಿ ಸಮಿತಿಯ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ತಾವು ಕೂಡ ನಮ್ಮ ಅಸೋಶಿಯೇಶನ್ ಪದಾಧಿಕಾರಿಗಳೊಂದಿಗೆ ಈ ವಿಷಯ ಕುರಿತು ಸುದೀರ್ಘ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿದರು

ಒಂದು ವಾರದೊಳಗೆ ಎಷ್ಟು ರೂಮ್ ಗಳು ನಮ್ಮಿಂದ ಕೊಡಲು ಸಾಧ್ಯವಾಗುವುದು ಎಂಬುದನ್ನು ನಿಖರವಾಗಿ ಮುಂದಿನ ಸಭೆಯಲ್ಲಿ ತಿಳಿಸುವುದಾಗಿ ಅವರು ಭರವಸೆ ನೀಡಿದರು.

ನಾನೂ ಕೂಡ ವಸತಿ ಸಮಿತಿಯ ಓರ್ವ ಸದಸ್ಯನಾಗಿ ನಿಮ್ಮೊಂದಿಗೆ ಶ್ರಮ ವಹಿಸುತ್ತೇನೆ. ಎಲ್ಲರೂ ಸೇರಿ ಈ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಕಾಶ ಶೆಟ್ಟಿ ಅವರನ್ನು ವಸತಿ ಸಮಿತಿ ಚೇರಮನ್ ಪ್ರಭು ಮಲ್ಲಿಕಾರ್ಜುನಮಠ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅವರು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ವಸತಿ ಸಮಿತಿ ಸದಸ್ಯರಾದ ಸೀತಾರಾಮ ಕುಲಕರ್ಣಿ, ದೇವೇಂದ್ರ ಹೆಳವರ, ಶಕೀಲ ಬಾಗಮಾರೆ, ಸಚೇಂದ್ರ ಲಂಬು, ಸಮೀರ್ ಇನಾಮದಾರ, ನಿಂಗಪ್ಪ ನಾವಿ, ರಾಹುಲ ಆಪ್ಟೆ, ರವಿ ಬಿಸನಾಳ, ಶ್ರೀನಿವಾಸ ಸೂರಗೊಂಡ, ಶ್ರೀಕಾಂತ ಕಲ್ಲಹಿಪ್ಪರಗಿ, ಆಸೀಫ್ ಬಾಗವಾನ, ಶರಣು ಸಬರದ, ಶಿವು ಭುಂಯ್ಯಾರ, ಗೋಪಾಲ ಕನ್ನಿಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌