Muragod Padayatre: ಬಸವ ನಾಡಿನಿಂದ ಮುರಗೋಡ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವಕ್ಕೆ ಪಾದಯಾತ್ರೆ ಬೆಳೆಸಿದ ಭಕ್ತರು

ವಿಜಯಪುರ: ಶ್ರೀ ಕ್ಷೇತ್ರ ಕೆಂಗೆರಿ ಮುರಗೋಡದಲ್ಲಿ ಶ್ರೀ ಶಿವ ಚಿದಂಂಬರ ಮಹಾಸ್ವಾಮೀಗಳ 264ನೇ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವ ನ. 29 ರಂದು ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೋಳ್ಳಲು ಬಸವ ನಾಡು ವಿಜಯಪುರದಿಂದ ಭಕ್ತರು ಪಾದಯಾತ್ರೆ ಬೆಳೆಸಿದರು.

ಪ್ರತಿವರ್ಷ ಈ ಮಹೋತ್ವಸ ನಡೆಯುತ್ತಿದೆ.  ಇದರ ಅಂಗವಾಗಿ ಶ್ರೀ ಚಿದಂಬರೇಶ್ವರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ವಿಜಯಪುರ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯಲ್ಲಿ ಭಕ್ತರು ತೆರಳಿದರು.  ವಿಜಯಪುರ ನಗರದಿಂದ ಹಲಗಣಿ, ಮುದೋಳ, ಯರಗಟ್ಟಿ, ಹಲಕಿ ಕ್ರಾಸ್ ಮೂಲಕ ನ. 28 ರಂದು ಈ ಯಾತ್ರಿಗಳು ಶ್ರೀ ಕ್ಷೇತ್ರ ತಲುಪಲಿದ್ದಾರೆ.

ಈ ಪಾದಯಾತ್ರೆಯಲ್ಲಿ ಸಂಚಾಲಕ ರಾಘವೇಂದ್ರ ಜೋಶಿ, ಸಹ ಸಂಚಾಲಕ ಸುಧೀಂದ್ರ ಕುಲಕರ್ಣಿ, ವೆಂಕಟೇಶ ಜೋಶಿ, ಸಚಿನ ಆಚಾರ್ಯ, ಪ್ರಾಣೇಶ ಅಗ್ನಿಹೋತ್ರಿ, ಕೃಷ್ಣಾ ಜೋಶಿ, ಶೇಷಗಿರಿ, ಚಿದಂಬರ ಜೋಶಿ ರೊಳ್ಳಿ, ವೆಂಕಟೇಶ ಜೋಶಿ ನಂದವಾಡಗಿ, ವಿಜಯ ಜೋಶಿ, ಪದ್ಮನಾಬ ಜೋಶಿ, ಸಂದೀಪ ಕುಲಕರ್ಣಿ, ಸಂದೀಪ ಕುಲಕರ್ಣಿ ಬರಡೋಲ, ಸಂಜು ಕುಲಕರ್ಣಿ ಬರಡೋಲ, ವೆಂಕಟೇಶ ಕುಲಕರ್ಣಿ ಮುಂತಾದವರು ಪಾಲ್ಗೋಂಡಿದ್ದಾರೆ.

Leave a Reply

ಹೊಸ ಪೋಸ್ಟ್‌