Gardern Cleaning: ಬಡಾವಣೆಯ ಯುವಕರ ಜೊತೆಗೂಡಿ ಉದ್ಯಾನ ಸ್ವಚ್ಛಗೊಳಿಸಿದ ಕಾರ್ಪೋರೇಟರ್ ಮಳುಗೌಡ ಪಾಟೀಲ

ವಿಜಯಪುರ: ಇದೇ ಮೊದಲ ಬಾರಿಗೆ ವಿಜಯಪುರ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ ಬಿಜೆಪಿಯ ನೂತನ ಕಾರ್ಪೋರೇಟರ್ ಮಳುಗೌಡ ಪಾಟೀಲ ತಮ್ಮ ಮಾದರಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.

ವಿಜಯಪುರ ನಗರದ ವಾರ್ಡ್ ಸಂಖ್ಯೆ 6ರ ಕಾರ್ಪೋರೇಟರ್ ಆಗಿರುವ ಅವರು, ತಮ್ಮ ವಾರ್ಡಿನಲ್ಲಿರುವ ಪ್ರಕೃತಿ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಮಳುಗೌಡ ಪಾಟೀಲ ಅವರು ಬಡಾವಣೆಯ ಯುವಕರು ಮತ್ತು ಹಿರಿಯರೊಂದಿಗೆ ಸೇರಿಕೊಂಡು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಕಾರ್ಪೋರೇಟರ್ ಮಳುಗೌಡ ಪಾಟೀಲ ಉದ್ಯಾನ ವನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ರವಿವಾರ ನಮ್ಮ ವಾರ್ಡಿನಲ್ಲಿ ಬರುವ ಎಲ್ಲಾ ಉದ್ಯಾನವನವನ್ನು ಸ್ವಚ್ಛಗೊಳಿಸಲಾಗುತ್ತಿದೆ.  ನಿಂರತರವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ.  ನಮ್ಮ ಈ ಸ್ವಚ್ಛತೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಜಯ ಕರಾಳೆ, ಆರ್. ಎಸ್. ಬಸರಗಿ, ಎಸ್. ಎನ್. ತೆಲ್ಲೂರ, ಸಂತೋಷ ನಿಂಬರಗಿ, ಎಸ್. ವಿ. ಚೋರಗಿ, ನಾಗರಾಜ ನಾಗೂರೆ, ಗಿರೀಶ ಕುಲಕರ್ಣಿ, ಸಂಗಪ್ಪ ಶಿವಣಗಿ, ಅಕ್ಷಯ ಕರಾಳೆ, ಅಮಿತ ರಾಠೋಡ, ಪ್ರಕಾಶ ನಾವಲಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌