Datta Jayanti: ಇಟ್ಟಂಗಿಹಾಳ ಸಚ್ಚಿದಾನಂದ ಮಹಾರಾಜ ಆಶ್ರಮದಲ್ಲಿ ಡಿ. 7 ರಂದು ದತ್ತ ಜಯಂತಿ ಆಚರಣೆ- ಮಹಾಂತೇಶ ಗುಲಗಂಜಿ

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಕೆ. ಎಚ್. ಗ್ರಾಮದ ಸಚ್ಚಿದಾನಂದ ಮಹಾರಾಜ ಆಶ್ರಮದಲ್ಲಿ ಡಿ. 7 ರಂದು ದತ್ತ ಜಯಂತಿ ಮಹೋತ್ಸವ  ನಡೆಯಲಿದೆ ಎೞದು ಆಶ್ರಮದ ಭಕ್ತ ಮಹಾಂತೇಶ ಗುಲಗಂಜಿ ತಿಳಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಡಿ. 7 ರಂದು ಬುಧವಾರ ಬೆ. 6ಕ್ಕೆ ಆಶ್ರಮದ ದೇವಸ್ಥಾನದಲ್ಲಿ ಗಣಪತಿ, ದತ್ತಾತ್ರೇಯ, ಶ್ರೀ ಭಿಮಾಶಂಕರ ಕ್ಷೇತ್ರಾದಿ ದೇವತೆಗಳ ಅಭಿಷೇಕ, ದೇವಾರ್ಚನೆ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ಮಂಗಳಾರುತಿ ಕಾರ್ಯಕ್ರಮಗಳು ನಡೆಯಲಿವೆ.

ಬೆ. 8ಕ್ಕೆ ಪುಣ್ಯಾಹವಾಚನ, ನವಗ್ರಹ, ಗಣಪತಿ, ಮೃತ್ಯುಂಜಯ ಸಹಿತ ದತ್ತಮಾಲಾ ಮಂತ್ರ ಹೋಮ ಆಯೋಜಿಸಲಾಗಿದೆ.  ಬೆ. 10ಕ್ಕೆ ಗೋ ಪೂಜೆ, ಗಂಗಾಪೂಜೆ, ಬೆ. 11.30ಕ್ಕೆ ಪೂರ್ಣಾಹುತಿ, ಮ. 12ಕ್ಕೆ ಶ್ರೀ ಸಚ್ಚಿದಾನಂದ ಮಹಾರಾಜರ ಸಮಾಧಿ ಸ್ಥಳದಲ್ಲಿ ಭಜನೆ, ಪಾದುಕೆ ಪೂಜೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾಮಂಗಳಾರುತಿ, ಮ. 1ಕ್ಕೆ ಪ್ರಸಾದ ವಿತರಣೆ ಕಾರ್ಯಕ್ರಮದ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂ. 6ಕ್ಕೆ ಶ್ರೀ ದತ್ತನ ತೊಟ್ಟಿಲು ಕಾರ್ಯಕ್ರಮ ಭಜನೆ ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾಮಂಗಳಾರುತಿ ಆದ ನಂತರ ರಾ. 8ಕ್ಕೆ ಪ್ರಸಾದ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಂತೇಶ ಗುಲಗಂಜಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌