Minister Humiliation: ಮಹಾ ಸಚಿವರಿಗೆ ಕರ್ನಾಟಕ, ಎಂಬಿಪಿ ಹೊಗಳಿ ಮಂಗಳಾರತಿ ಮಾಡಿದ ಮಹಾರಾಷ್ಟ್ರ ಗ್ರಾಮಸ್ಥರು

ವಿಜಯಪುರ: ಮಹಾರಾಷ್ಟ್ರ ಕರ್ನಾಟಕದ ವಿರುದ್ಧ ತಗಾದೆ ತೆಗೆಯುತ್ತ ಗಡಿ ಮತ್ತು ಜಲ ವಿಷಯಗಳಲ್ಲಿ ಕಿರಿಕಿರಿ ಮಾಡುತ್ತಿರುವುದು ಮಾಮೂಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕರ್ನಾಟಕ ಕೂಡ ಸೂಕ್ತ ತಕ್ಕುತ್ತರ ನೀಡಿತ್ತಲೇ ಇದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇದರ ಮುಂದುವರೆದ ಭಾಗವಾಗಿ‌ ಕರ್ನಾಟಕ ಕಾಲುವೆಗಳ ಮೂಲಕ ಮಹಾರಾಷ್ಟ್ರದ ಗಡಿಯ 28 ಗ್ರಾಮಗಳಿಗೆ ಮಾನವೀಯತೆ ಆಧಾರದ ಮೇಲೆ ನೀರು ಬಿಡುಗಡೆ ಮಾಡಿದೆ. ಈ ವಿದ್ಯಮಾನಗಳ ನಡುವೆಯೇ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ 42 ಗ್ರಾಮಸ್ಥರು‌ ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಠರಾವು‌ […]

Men Operation: ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗಿ ಮಾದರಿಯಾದ ಬಸವ ನಾಡಿನ 16 ಪುರುಷರು

ವಿಜಯಪುರ: ಜಿಲ್ಲೆಯ 15 ಜನ ಪುರುಷರು ಸಂತಾನ ಹರಣ ಚಿಕಿತ್ಸೆ ಒಳಗಾಗುವ ಮೂಲಕ ಗಮನ ಸೆಳೆದಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ, ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಡಾ.ಗಿರೀಶ ಕುಲ್ಲೋಳ್ಳಿ, ಡಾ.ತೇಜಸ್ವೀನಿ ವಲ್ಲಭ ಹಾಗೂ ಡಾ.ಎಂ.ಬಿ.ಪಾಟೀಲ ಶಸ್ತ್ರಚಿಕಿತ್ಸಾ ತಂಡವು ಈ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿದ 15 ಜನ ಪುರುಷರು ಸಂತಾನ ಹರಣ ಶಸ್ತ್ರಚಿಕಿತ್ಸೆ ನೇರವೇರಿಸಿದರು. […]