ಹಮೀದ್ ಮುಶ್ರಿಫ್ ಜನಸಂಪರ್ಕ ಕಚೇರಿಯಲ್ಲಿ ಸೋನಿಯಾ ಗಾಂಧಿ‌ ಜನ್ಮದಿನ ಆಚರಣೆ

ವಿಜಯಪುರ: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಅವರ ಜನಸಂಪರ್ಕ ಕಚೇರಿಯಲ್ಲಿ ಸೋನಿಯಾ ಗಾಂಧಿ ಅವರ ಜನ್ಮದಿನ ಆಚರಿಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮಾತನಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಹಮೀದ್ ಮುಶ್ರಿಫ್, ಸೋನಿಯಾ ಗಾಂಧಿ ಜೀವನ ಆದರ್ಶಗಳನ್ನು ಶ್ಲಾಘಿಸಿದರು. ಅವರ ನೇತೃತ್ವದಲ್ಲಿ ಮತ್ತೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೆ ಬರುಲಿದೆ. ದೇಶಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿರುವ ಸೋನಿಯಾ ಗಾಂಧಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದ್ದರೂ ಧೃತಿಗೆಡದೆ ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ನಿರತರಾಗಿದ್ದಾರೆ.‌‌ ಒಬ್ಬ ಮಹಿಳೆಯಾಗಿ ಒಂದು ರಾಷ್ಟ್ರೀಯ ಪಕ್ಷದ ಪರಮೋಚ್ಛ ನಾಯಕಿಯಾಗಿ ಅವರು ಮಾಡಿದ ಸಾಧನೆ ಮತ್ತು ಅವರಲ್ಲಿರುವ ಕಾಳಜಿಯನ್ನು ಎಲ್ಲರೂ ನೆನಸಬೇಕು ಎಂದು ಹಮೀದ ಮುಶ್ರಿಫ್ ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ. ಕೆ. ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಕಾಂಗ್ರೆಸ್ ಮುಖಂಡರಾದ ಜಮೀರ ಬಕ್ಷಿ, ವ್ಯೆಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ, ಅಬ್ದುಲ್ ರಜಾಕ ಹೊರ್ತಿ, ಮೈನೂದ್ದಿನ ಬೀಳಗಿ, ಶಬ್ಬೀರ ಜಹಾಗೀರದಾರ, ಅಪ್ಪು ಪೊಜಾರಿ, ಸಂತೊಶ ಪವಾರ, ಅಕ್ರಮ ಮಾಶ್ಯಾಳಕರ, ಶರಣಪ್ಪಾ ಯಕ್ಕುಂಡಿ, ವಿದ್ಯಾರಾಣಿ ತುಂಗಳ, ರುಕ್ಮಿಣಿ ಚವ್ವಾಣ, ಲಕ್ಷ್ಮಿಬಳ್ಳಾರಿ, ಕಲ್ಲಪ್ಪ ಪಾರಶೆಟ್ಟಿ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌