Health Camp: ಬಸವಣ್ಣನವರ ತವರಿನಲ್ಲಿ ಅಗರವಾಲ ಕುಟುಂಬದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಬಸವನ ಬಾಗೇವಾಡಿಯ ಶ್ರೀ ಸತ್ಯನಾರಾಯಣ ದೇವಸ್ಥಾನ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಗರವಾಲ ಪರಿವಾರದವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಈ ಕಾರ್ಯಕ್ರಮಕ್ಕೆ ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬಸವನ ಬಾಗೇವಾಡಿಯ ಹಿರೇಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯರು ಚಾಲನೆ ನೀಡಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ನಿತೀನ್ ಅಗರವಾಲ ಮಾತನಾಡಿದರು

ಖ್ಯಾತ ವೈದ್ಯರಾದ ಡಾ.ನಿತೀನ ಅಗರವಾಲ, ಡಾ. ಆನಂದ ಕಣಬೂರ ಮತ್ತು ಡಾ. ಮನಿಷಾ ಅಗರವಾಲ ಶಿಬಿರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಮಧುಮೇಹ, ರಕ್ತದೊತ್ತಡ, ಸಾಮಾನ್ಯ ರೋಗ, ನೇತ್ರ ತಪಾಸಣೆ, ಸ್ತ್ರಿರೋಗ ತಪಾಸಣೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಸಿ. ಪಟ್ಟಣಶೆಟ್ಟಿ, ಸತ್ಯನಾರಾಯಣ ಅಗರವಾಲ, ಬ್ರಿಜಮೋಹನ್ ಅಗರವಾಲ, ಗೋಪಾಲ ಅಗರಚಾಲ ಮತ್ತು ಅಗರವಾಲ ಯುವ ಮಂಡಳಿ ಪದಾಧಿಕಾರಿಗಳು ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.

ಸುಮಾರು 300 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Leave a Reply

ಹೊಸ ಪೋಸ್ಟ್‌