Ganiga Office Bearers: ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ನೂತನ ಪದಾಧಿಕಾರಿಗಳ ನೇಮಕ

ವಿಜಯಪುರ: ಜಿಲ್ಲಾ ಗಾಣಿಗ‌ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಸಭೆ ವಿಜಯಪುರ ನಗರದ ವನಶ್ರೀ‌ ಸಭಾಭವನದಲ್ಲಿ ನಡೆಯಿತು.

ವಿಜಯಪುರ ಜಿಲ್ಲಾ ಸಮಾಜ‌ ಸಂಘದ ನೂತನ ಗೌರವ ಅಧ್ಯಕ್ಷರಾಗಿ ಹಿರಿಯರಾದ ಬಿ. ಎಂ. ಪಾಟೀಲ್ ಕತ್ನಳ್ಳಿ, ಜಿಲ್ಲಾಧ್ಯಕ್ಷರಾಗಿ ಬಿ. ಬಿ. ಪಾಸೋಡಿ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಡಾ. ಅಶೋಕ ಸಿ. ತರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶರಣಬಸಪ್ಪ ಮ. ಮಸಳಿ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ನ್ಯಾಯವಾದಿ ಸಂಗಮೇಶ ಪಿ. ಪುಟ್ಟಿ ಹಾಗೂ ಜಿಲ್ಲಾ ಖಜಾಂಚಿಯಾಗಿ ಬಸವಂತ್ರಾಯ ಕೆ. ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಖಿಲ‌ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಗಾಣಿಗ‌ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಸಭೆ ವಿಜಯಪುರದಲ್ಲಿ ನಡೆಯಿತು.

ಈ ಸಭೆಯಲ್ಲಿ ವಿಧಾನ ಪರಿಷತ ಮಾಜಿ ಸದಸ್ಯ ಬಿ. ಜಿ. ಪಾಟೀಲ ಹಲಸಂಗಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಶರಣಬಸು ಅರಕೇರಿ, ಮುಖಂಡರಾದ ಎಸ್. ಎಸ್. ಶಿರಾಡೋಣ, ಎನ್. ಎಸ್. ಲೋಣಿ, ಎಚ್. ಆರ್. ಉಟಗಿ, ಬಿ. ಪಿ. ಸರನಾಡಗೌಡ್ರ, ಅಶೋಕ ನ್ಯಾಮಗೌಡ, ಹೆಬ್ಬಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ನಾನಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು ಎಂದು‌ ಮಲ್ಲಿಕಾರ್ಜುನ ಲೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌