NPS Bicycle: ಹೊಸ ಪಿಂಚಣಿ ಯೋಜನೆ ವಿರೋಧಿಸಿ ಬಸವ ನಾಡಿನಿಂದ ರಾಜಧಾನಿಗೆ ಸೈಕಲ್ ಮೂಲಕ ಸಂಚರಿಸಿ ಗಮನ ಸೆಳೆದ ಗುಮ್ಮಟ ನಗರಿಯ ಶಿಕ್ಷಕ

ವಿಜಯಪುರ: ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ವಿರೋಧಿಸಿ ಸರಕಾರಿ ನೌಕರರು ಬೆಂಗಳೂರಿನಲ್ಲಿ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಪ್ರತಿಭಟನೆ ಬೆಂಬಲಿಸಿ ಬಸವ ನಾಡು ವಿಜಯಪುರದ ಶಿಕ್ಷಕ ತೌಸೀಫ್ ಪಟೇಲ್ ವಿನೂತನವಾಗಿ ಹೋರಾಟ ನಡೆಸಿದ್ದಾರೆ.  ಗುಮ್ಮಟ ನಗರಿ ವಿಜಯಪುರದಿಂದ ರಾಜಧಾನಿ ಬೆಂಗಳೂರಿಗೆ ಸೈಕಲ್ ಮೂಲಕ ತೆರಳಿ ಈ ಶಿಕ್ಷಕ ಗಮನ ಸೆಳೆದಿದ್ದಾರೆ.

ಸೈಕಲ್ ಮೇಲೆ ಬೆಂಗಳೂರಿಗೆ ಬಂದ ಶಿಕ್ಷಕರನ್ನು ಪ್ರತಿಭಟನಾ ನಿರತರು ಸನ್ಮಾನಿಸಿದರು ಸೈಕಲ್ ಮೇಲೆ ಪ್ರತಿಭಟನಾ ಸ್ಥಳಕ್ಕೆ ಬಂದ ಯುವ ಶಿಕ್ಷಕರನ್ನು ಅಲ್ಲಿ ಧರಣಿ ನಡೆಸುತ್ತಿದ್ದ ಎನ್‌ ಪಿ ಎಸ್ ವಿರೋಧಿ ನೌಕರರು ಸನ್ಮಾನಿಸಿ ಗೌರವಿಸಿದ್ದಾರೆ.

Leave a Reply

ಹೊಸ ಪೋಸ್ಟ್‌