ಶ್ರೀಗಳ ಅಂತಿಮ ದರ್ಶನ, ಅಂತಿಮ ಯಾತ್ರೆ, ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಸಲು ಸಹಕರಿಸಿ- ಸಿಎಂ ಬಸವರಾಜ ಬೊಮ್ಮಾಯಿ ಮನವಿ- ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಸವನಾಡು ವಿಜಯಪುರಕ್ಕೆ ಆಗಮಿಸಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ. 

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಡಿದಾಳಗಳಲ್ಲಿ ನಮಸ್ಕರಿಸಿ, ಇಲ್ಲಿ ನೆರೆದ ಎಲ್ಲ ಪರಮಪೂಜ್ಯರು ಮತ್ತು ಎಲ್ಲ ಮುಖಂಡರಲ್ಲಿ ನಮಸ್ಕರಿಸಿ, ಅಪಾರ ಸಂಖ್ಯೆಯಲ್ಲಿ ಬಂದಿರುವ ಭಕ್ತಾದಿಗಳಲ್ಲಿ ಒಂದು ಮನವಿ ಮಾಡು್ತತಿದ್ದೇೆ.  ಇವತ್ತು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದು ಬರುತ್ತಿದ್ದೀರಿ.  ಶ್ರೀಗಳ ಪ್ರವಚನಗಳಲ್ಲಿ ಯಾವ ರೀತಿ ಶಾಂತಿ ಮತ್ತು ಶಿಸ್ತು ಇರುತ್ತದೆಯೋ ಆ ರೀತಿ ನಡೆದುಕೊಂಡು ಬಂದಿದ್ದೀರಿ.  ಸರಕಾರಿ ಗೌರವ ನೀಡಲಾಗುತ್ತದೆ.  ಪೂಜ್ಯರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವುದರಿಂದ ಸೂರ್ಯಸ್ತದೊಳಗೆ ಸಂ. 5.15ಕ್ಕೆ ಸರಕಾರಿ ಗೌರವ ನೀಡಲಾಗುತ್ತದೆ.  ನಂತರವೂ ಭಕ್ತರಿಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.  ಯಾರೂ ಆತಂಕ, ಆತುರ ಪಡುವ ಅಗತ್ಯವಿಲ್ಲ.  ಶಾಂತ ರೀತಿಯಲ್ಲಿ ದರ್ಶನ ಪಡೆದು ಮುಂದುವರೆಯಿರಿ.  ನಾವು, ಕನೇರಿ ಶ್ರೀಗಳು ಸೇರಿದಂತೆ ಎಲ್ಲರೂ ಸೇರಿ ಆದಷ್ಟು ಹೆಚ್ಚಿನ ಭಕ್ತಾದಿಗಳಿಗೆ ದರ್ಶನ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ.  ಮಠದಲ್ಲಿ ಎಲ್ಲರಿಗೂ ಅವಕಾಶವಿಲ್ಲ.  ಹೀಗಾಗಿ ಸೈನಿಕ ಶಾಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ.  ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಬಂದಿದ್ದೀರಿ.  ಯಾವುದೇ ಸಮಯ ನಿಗದಿ ಪಡಿಸಿಲ್ಲ.  ಹೆಚ್ಚಿನ ಸಮಯ ನೀಡುತ್ತೇವೆ  ಸರಕಾರಿ ಗೌರವ ಮುಗಿದ ನಂತರವೂ ಎರಡ್ಮೂರು ಗಂಟೆಗಳ ಕಾಲ ಅವಕಾಶ ನೀಡುತ್ತೇವೆ.  ಆದಷ್ಟು ಬೇಗನೆ ಜನತೆ ದರ್ಶನ ಪಡೆದು ಸಹಕಾರ ನೀಡಬೇಕು ಎಂದು ಪರಮಪೂಜ್ಯರು ಮತ್ತು ಎಲ್ಲರ ಪರವಾಗಿ ವಿನಂತಿ ಮಾಡುತ್ತೇವೆ.

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣ್ಯರು

ಭಕ್ತರೆಲ್ಲರೂ ಸಹಕಾರ ನೀಡಬೇಕು.  ಸಚಿವರು, ಶಾಸಕರು ಇಲ್ಲಿದ್ದಾರೆ.  ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ.  ಎಲ್ಲರಿಗೂ ಸಹಕಾರ ನೀಡಬೇಕು.  ಆದಷ್ಟು ಬೇಗ ದರ್ಶನ ಪಡೆದು ಬೇರೆಯವರಿಗೆ ಅವಕಾಶ ನೀಡಬೇಕು.  ಅಂತಿಮ ದರ್ಶನ, ಅಂತಿಮ ಯಾತ್ರೆ ಮತ್ತು ಅಂತ್ಯಕ್ರಿಯೆ ಸರಾಗವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ವಿ. ಸೋಮಣ್ಣ, ಶಶಿಕಲಾ ಜೊಲ್ಲೆ, ಅಪ್ಪು ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮ ಪ್ರತಿನಇಧಗಳೊಂದಿಗೆ ಮಾತನಾಡದಿ ಅವರು, ಕರ್ನಾಟಕದ ಜ್ಞಾನಮೂರ್ತಿ ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮೀಗಳು ತಮ್ಮ ದೇಹತ್ಯಾಗ ಮಾಡದ್ದಾರೆ.  ಅವರ ಬಾಲ್ಯದಿಂದ ಆಧ್ಯಾತ್ಮಿಕವಾಗಿ ಬಹಳಷ್ಟು ಜ್ಞಾನ ಹೊಂದಿದ್ದಾರೆ.  ಶಿವಾನಂದ ಮಠದ ಮಲ್ಲಿಕಾರ್ಜುನ ಮಠದ ಸ್ವಾಮೀಜಿ ಅವರನ್ನು ಗುರುತಿಸಿ ಅವರಿಗೆ ಎಲ್ಲ ಕಡೆ ಪ್ರವಚನ ಮಾಡಿಸಿದ್ದಾರೆ.  ಸಿದ್ದೇಶ್ವರ ಸ್ವಾಮೀಜಿ ಕೆಲವು ವೈಚಾರಿಕ ಚೌಕಟನ್ನು ಮೀರಿ ಆಧ್ಯಾತ್ಮವನ್ನು ಒಪ್ಪಿಕೊಂಡವರು.  ಪರಮಾತ್ಮ ಒಬ್ಬನೆ.  ಸೃಷ್ಠಿ ಮತ್ತು ಸೃಷ್ಠಿಕರ್ತನ ಸಂಗಮವೇ ನಮ್ಮ ಬದುಕು.  ಈ ಆಧ್ಯಾತ್ಮಿಕ ವಿಚಾರದಲ್ಲಿ ಮೂರು ರೀತಿಯ ಜನ ಇರುತ್ತಾರೆ.  ಒಬ್ಬರು ಯಾವಾಗಲೂ ಕೂಡ ಹಿಂದಿನ ವಿಚಾರಗಳನ್ನು ಪ್ರತಿಪಾದಿಸುತ್ತಾರೆ.  ಇನ್ನೋಬ್ಬರು ಕ್ರಾಂತಿಗಳು ಬದಲಾವಣೆ ಮಾಡುವಂಥವರು.  ಮೂರನೇಯವರು ಸಮಾಜದ ಸುಧಾರಕರು.  ಪರಮಪೂಜ್ಯರು ಮೂರನೇ ಥರದವರು.  ಮೊದಲನೆಯವರು ತಾತ್ಕಾಲಿಕವಾಗಿ ಯಶಸ್ಸು ಕಂಡಿರುತ್ತಾರೆ.  ಆದರೆ, ಮೂರನೆಯವರು ಬುದ್ಧ, ಬಸವ ಅವರಂಥೆ, ಸಮಾಜವನ್ನು ಸುಧಾರಿಸಲು ಪ್ರಯತ್ನ ಮಾಡುತ್ತಾರೆ.  ಅವರು ನಮ್ಮ ಪುಣ್ಯದ ನಾಡಿನಲ್ಲಿ ಜನಿಸಿದ್ದಾರೆ.  ಅವರು ವೈಚಾರಿಕತೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡಿದ್ದಾರೆ.  ಅವರ ಸಮಯದಲ್ಲಿ ನಾವಿರುವುದು ಪುಣ್ಯವೇ ಸರಿ.  ಭವಿಷ್ಯದಲ್ಲಿ ನಾವೆಲ್ಲ ಇಂಥ ಮಹಾತ್ಮರ ವಿಚಾರಗಳನ್ನು ಮಕ್ಕಳಿಗೆ ತಿಳಿ ಹೇಳಬೇಕಾಗುತ್ತದೆ.  ಅವರ ವಿಚಾರಗಳನ್ನು, ಅವರು ಪೂರ್ವಾಶ್ರಮ, ಈಗಿರುವ ಆಶ್ರಮದದಲ್ಲಿನ ವಿಚಾರಗಳು ದಾರಿದೀಪವಾಗಿವೆ ಎಂದು ಹೇಳಿದರು.

ಅಗ್ನಿಸ್ಪರ್ಶ ಮಾಡುವ ಮೂಲಕ ಅವರ ಎಲ್ಲ ಶರೀರ ನಿಸರ್ಗಕ್ಕೆ ಸೇರುತ್ತದೆ.  ಹೀಗಾಗಿ ಅವರು ನಿಸರ್ಗದಲ್ಲಿ ಅವರು ಎಲ್ಲ ಕಡೆ ಇರುತ್ತಾರೆ. ಯಾರು ಅವರನ್ನು ನೆನೆದು ಮನದಾಳದಿಂದ ಸೇವೆ ಮಾಡುತ್ತಾರೋ ಅವರಿಗೆ ಆಧ್ಯಾತ್ಮಿಕವಾಗಿ ವೈಚಾರಿಕ ದರ್ಶನ ನೀಡಲಿದ್ದಾರೆ.  ಎಲ್ಲಿಯವರೆಗೂ ಭೂಮಂಡಲ, ನಿಸರ್ಗ, ಸೂರ್ಯ ಚಂದ್ರ, ನೀರು ಇರುತ್ತವೆ ಅವರು ನಿರಂತರವಾಗಿ ಉರುತ್ತಾರೆ.  ಅವರನ್ನು ಬದುಕಿಸಿಕೊಳ್ಳಲು ನಮಗೆ ಆಗಲಿಲ್ಲ.  ಸ್ವಾಮಿ ವಿವೇಕಾನಂದರು ಬಹಳ ದೊಡ್ಡ ಸಾಧಕರು.  ಸಾಧಕನಿಗೆ ಸಾಧನೆ ಅಂತ್ಯವಲ್ಲ.  ಸಾವಿನ ನಂತವರೂ ಬದುಕುವುದು ಸಾಧನೆ.  ಇಷ್ಟು ಜನಸಾಗರವನ್ನು ನೋಡಿ ಅವರ ಭಕ್ತಿ, ಪ್ರೀತಿ, ವಾತ್ಸಲ್ಯವನ್ನು ನೋಡಿದಾರೆ.  ಅವರು ಇವರ ಮಧ್ಯೆ ಇದ್ದಾರೆ.  ಜೀವನದಲ್ಲಿ ಮರಣವೂ ಕೂಡ ಪ್ರಕ್ರಿಯೆ.  ಅದರ ನಂತರ ಬದುಕುವುದು ಸಾಧನೆ.  ಸ್ವಾಮಿ ವಿವೇಕಾನಂದರ ನಂತರ ಅತ್ಯಂತ ಪ್ರಭಾವ ಬೀರಿದವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಎಂದು ಸಿಎಂ ಹೇಳಿದರು.

ಅವರು ನಮಗೆ ಬಹಳ ದೊಡ್ಡ ಪ್ರೇರಣಾ ಶಕ್ತಿ, ಜಗತ್ತಿಗೆ ಪ್ರೇರಣಾ ಶಕ್ತಿ.  ಅವರ ವಿಚಾರಗಳನ್ನು ಉಳಿಸಿಕೊಂಡು ಬಂದರೆ ಅವರಿಗೆ ದೊಡ್ಡ ಗೌರವ ಸಲ್ಲಿಸಿದಂತೆ.  ಅವರ ಸಾವನ್ನು ಬರಮಾಡಿಕೊಂಡು ಎದುರಿಸಿ ಜಯಿಸಿದವರು.  ಈಗಲೂ ಅವರ ಮುಖದ ಮೇಲೆ ಕಳೆಯಿದೆ.  ಸಾವನ್ನು ಅರಿತು ಎದುರಿಸಿ ಸ್ವಾಗತಿಸಿದವರು.  ಬಹಳ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.  ದರ್ಶನಕ್ಕೆ ಅವಧಿ ವಿಸ್ತರಣೆ.  ಎಲ್ಲರೂ ಸಹಕರಿಸಬೇಕು.  ಮೆರವಣಿಗೆಯಲ್ಲಿಯೂ ಸಹರಿಸಬೇಕು.  ಅಂತ್ಯಕ್ರಿಯೆಗೂ ಹೆಚ್ಚಿನ ಜನ ಬರಬಾರದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಒಳ್ಳೆಯ ಕೆಲಸ ಮಾಡಿದೆ ಎಂದು ಶ್ಲಾಘಿಸಿದ ಅವರು, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸುವಂತೆ ಭಕ್ತರ ಒತ್ತಾಯದ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು.

ಸಿದ್ಧೇಶ್ವರ ಉಯಿಲು(ವಿಲ್)ನಲ್ಲಿ ಏನಿದೆ ಅದರಂತೆ ನಾವು ನಡೆದುಕೊಳ್ಳುತ್ತೇವೆ.  ಭಕ್ತರ ಭಾವನೆಗಳಿಗೆ ನಮ್ಮ ಗೌರವವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಸಚಿವರಾದ ಮುರುಗೇಶ ನಿರಾಣಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ ಪ್ರತಿಪಕ್ಷದ ಸಚೇತಕ ಪ್ರಕಾಶ ರಾಠೋಡ, ಮಾಜಿ ಸಚಿವ ಸಿ. ಎಸ್. ನಾಡಗೌಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌