ಲಿಂ. ಸಿದ್ದೇಶ್ವರ ಸ್ವಾಮೀಜಿ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸಬೇಕೆಂಬುದು ಭಕ್ತರ ಆಶಯ- ಎಂ. ಬಿ. ಪಾಟೀಲ

ವಿಜಯಪುರ: ಶತಮಾನದ ಸಂತ, ನಡೆದಾಡಿದ ದೇವರು ಲಿಂ. ಸಿದ್ಧೇಶ್ವರ ಶ್ರೀಗಳ ಕುರಿತು ಪಠ್ಯಪುಸ್ತಕಗಳಲ್ಲಿ ಇರಬೇಕು ಎಂಬುದು ಎಲ್ಲರ ಆಶಯವಾಗಿದೆ.  ಆದರೆ, ಇದನ್ನು ನಾನು ರಾಜಕೀಯವಾಗಿ ಹೇಳುವುದಿಲ್ಲ ಎಂದು ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. 

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಿತಾಭಸ್ಮದ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಲಿಂ. ದೇವರು ಸಿದ್ದೇಶ್ವರ ಸ್ವಾಮೀಜಿ ಜೀವನಗಾಥೆ ಕುರಿತು ಪಠ್ಯಪುಸ್ತಕದಲ್ಲಿ ಇರಬೇಕು ಎನ್ನುವುದು ಎಲ್ಲರ ಆಶಯವಾಗಿದೆ.  ಆದರೆ, ಇದನ್ನು ನಾನು ರಾಜಕೀಯವಾಗಿ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂ. ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಂ. ಬಿ. ಪಾಟೀಲ, ಸ್ವಾಮೀಜಿ ಈಗಾಗಲೇ  ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದರು.  ಅಂತಿಮ ವಿದಾಯ ಕಾರ್ಯಕ್ರಮಕ್ಕೂ ಸರಕಾರದಿಂದ ಯಾವುದೇ ಅನುದಾನ ಪಡೆದಿಲ್ಲ.  ‌ಅದನ್ನು ನಾವು ಭಕ್ತರೇ ನೋಡಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಚಿತಾಭಸ್ವ ವಿಸರ್ಜನೆ ವಿಚಾರ

ಈ ಮಧ್ಯೆ, ಲಿಂ. ಸಿದ್ಧೇಶ್ವರ ಸ್ವಾಮೀಜಿ ಅವರ ಚಿತಾಭಸ್ಮ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣಾ, ಕಾವೇರಿ, ಹಿಂದೂ ಮಹಾಸಾಗರ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಅಸ್ತಿ ವಿಸರ್ಜನೆ ವಿಚಾರಗಳfbz.  ಅದೆಲ್ಲವನ್ನು ಜ್ಞಾನಯೋಗಾಶ್ರಮದ ಸಮಿತಿಯವರು ನಿರ್ಧಾರ ಮಾಡುತ್ತಾರೆ.  ಇದು ನನ್ನಂಥವರೊಬ್ಬರೇ ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದು ಎಂ. ಬಿ.  ಪಾಟೀಲ ಸ್ಪಷ್ಟಪಡಿಸಿದರು.

ಶ್ರೀಗಳ ಆಶಯಂದತೆ ಅಂತ್ಯಕ್ರಿಯೆ ನಡೆದಿದೆ

ಈ ಮಧ್ಯೆ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಕುರಿತು ಪ್ರತಿಕ್ರಿಯೆ ನೀಡಿದ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷರು, ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಶ್ರೀಗಳ ಆಶಯದಂತೆ ಶಿಸ್ತು, ಸರಳವಾಗಿ, ಮನಸ್ಸು ಒಪ್ಪುವ ರೀತಿ ನಡೆಯಿತು.  ಇದಕ್ಕೆ ಸರಕಾರ, ಜಿಲ್ಲಾಡಳಿತ, ಸಂಘ- ಸಂಸ್ಥೆಗಳು ಸಹಕಾರ ನೀಡಿವೆ.  ಬಿ ಎಲ್ ಡಿ ಇ ಸಂಸ್ಥೆ, ಶ್ರೀ ಸಿದ್ಧೇಶ್ವರ ಸಂಸ್ಥೆ, ನಾನಾ ಸಂಘ- ಸಂಸ್ಥೆಗಳು ಸಹಕಾರ ನೀಡಿವೆ.  ಎಲ್ಲರಿಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬಸವಲಿಂಗ ಸ್ವಾಮೀಜಿ ಜೊತೆ ಬಸವನಾಡಿನ ಜನತೆ, ಪಕ್ಷ, ಜಾತ್ಯತೀತವಾಗಿ ಇದ್ದೇವೆ.  ಅಪ್ಪೋರ (ಸ್ವಾಮೀಜಿಗಳ) ಆಶಯದಂತೆ ಗದ್ದುಗೆ, ಸ್ಮಾರಕ ಇಲ್ಲದೇ ಮುಂದುವರೆಯಬೇಕು ಎನ್ನುವುದಕ್ಕೆ ಎಲ್ಲರ ಸಹಕಾರ ಇದೆ,  ಜ್ಞಾನಯೋಗಾಶ್ರಮದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಜೀವಂತವಾಗಿ ನಡೆಯಬೇಕು. ಇದೊಂದು ಸಣ್ಣ ಪ್ರಸ್ತಾವನೆ ಇದೆ.  ಗದ್ದುಗೆ, ಸ್ಮಾರಕ ಇಲ್ಲದೇ ಆಗಬೇಕು, ಮುಂದಿನ ಕಾರ್ಯಗಳು ಸುತ್ತೂರು, ಕನೇರಿ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ.  ನಾವು ಭಕ್ತರಾಗಿ ಇರುತ್ತೇವೆ.  ನಾನು ಪ್ರಸ್ತಾವನೆ ಕೊಟ್ಟಿದ್ದೇನೆ.  ಇದಕ್ಕೆ ಸ್ವಾಮೀಜಿಗಳು, ನಿವೃತ್ತ ನ್ಯಾಯಮೂರ್ತಿ ಪಾಚ್ಚಾಪುರೆ ಎಲ್ಲರಿಗೂ ತಿಳಿಸಿದ್ದಾರೆ.  ನಿರಂತರವಾಗಿ ಈ ಜ್ಞಾನಯೋಗಾಶ್ರಮ ಚಟುವಟಿಕೆಗಳ ಕೇಂದ್ರವಾಗಿರಬೇಕು ಎಂದು ಶ್ರೀಗಳು ಹೇಳಿದ್ದಾರೆ.  ಇದಕ್ಕೆ ಎಲ್ಲರೂ ಒಪ್ಪಬೇಕು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಶ್ರೀಗಳ ಆಶಯದಂತೆ ಅಂತ್ಯಕ್ರಿಯೆ ಶಿಸ್ತುಬದ್ಧವಾಗಿ ಮತ್ತು ಸರಳವಾಗಿ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಯೂ ನಡೆಯದಂತೆ ಶ್ರೀಗಳೂ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ನಡೆದಿದೆ.  ಇದಕ್ಕೆ ವಿಜಯಪುರ ಜಿಲ್ಲಾಡಳಿತ, ಸಂಘ- ಸಂಸ್ಥೆಗಳು, ವ್ಯಕ್ತಿಗಳು ಸೇರಿದಂತೆ ಎಲ್ಲರೂ ಕೂಡ ಸಹಕಾರ ನೀಡಿದ್ದಾರೆ.  ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸಲಿಂಗ ಮಹಾಸ್ವಾಮೀಜಿ, ವೈಯಕ್ತಿಕವಾಗಿ ವಿಜಯಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

ಈ ಸಂದರ್ಭದದಲ್ಲಿ ರವಿ ಮುಕರ್ತಿಹಾಳ, ಬಾಪೂಜಿ ನಿಕ್ಕಂ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌