ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯ ಪದ್ದತಿ ಹೋಮಿಯೋಪಥಿ: ಡಾ. ರಾಜ ಕೆ. ಮನಚಂದಾ

ಬಾಗಲಕೋಟೆ: ಜನ ಉಪಯೋಗಿಸುವ ಪ್ರಪಂಚದ ಎರಡನೇ ವೈದ್ಯ ಪದ್ದತಿ ಹೋಮಿಯೋಪಥಿಯಾಗಿದೆ ಎಂದು ದೆಹಲಿ ಸರಕಾರದ ಆಯುಷ್ ಕಮೀಷನರ ಡಾ. ರಾಜ ಕೆ. ಮನಚಂದಾ ಹೇಳಿದ್ದಾರೆ.  ಬಾಗಲಕೋಟೆ ನಗರದಲ್ಲಿ ಪ್ರತಿಷ್ಛಿತ ಬಿ ವಿ ವಿ ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಹೋಮಿಯೋಪತಿ ಪೀತಾಮಹ ಡಾ. ಸಾ ಮುಯಲ್ ಹಾನಿಮನರ್ ಮೂರ್ತಿಯನ್ನು ಅನಾವರಣ ಮಾಡಿದರು.  ನಂತರ ಕಾಲೇಜಿನಲ್ಲಿ ಇದೇ ಮದಲ ಬಾರಿಗೆ ನಡೆದ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಹೋಮಿಯೋಪತಿ ವೈದ್ಯ ಪದ್ದತಿ ಅತೀ ಹೆಚ್ಚು […]

ಸಿಡಿ ಇಟ್ಟುಕೊಂಡೇ ಮಂತ್ರಿಯಾಗುತ್ತಾರೆ- ನಾ ಅಂಥ ಹಲ್ಕಾ ಕೆಲಸ ಮಾಡಲ್ಲ- ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಸಿಡಿ ಇಟ್ಟುಕೊಂಡೇ ಇವರು ಮಂತ್ರಿಯಾಗುತ್ತಾರೆ, ನಾ ಅಂಥ ಹಲ್ಕಾ ಕೆಲಸ ಮಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ, ಹರಿಹರ ಸ್ವಾಮೀಜಿ ಬಗ್ಗೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಿದರೆ ಸರಿಯಿರಲ್ಲ ಎಂದು ಸಚಿವ ಮುರುಗೇಶ ನಿರಾಣಿ ಬೆಳಿಗ್ಗೆ ನೀಡಿರುವ ಎಚ್ಚರಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಆಂವಾ ಏನ್ ಹೇಳುದ ಹೇಳಲಿ ಅಂತಾ ಹೇಳಿಕೆಗೆ ಉತ್ತರ ಕೊಡುವ ತಾಕತ್ತ ಇದೆ.  ನಮ್ಮ ಬಳಿಯೂ ಬಹಳ ಇದೆ.  […]

ನೀರಾವರಿ ಕೆಲಸಗಳಿಗೆ ಸಿದ್ಧೇಶ್ವರ ಸ್ವಾಮೀಜಿಗಳ ಮಾಡಿರುವ ಆಶೀರ್ವಾದ ನನಗೆ ನೋಬೆಲ್ ಪ್ರಶಸ್ತಿಗಿಂತಲೂ ಹೆಚ್ಚು ಸಂತೋಷ ತಂದಿದೆ- ಎಂ. ಬಿ. ಪಾಟೀಲ

ವಿಜಯಪುರ: ಜಲಸಂಪನ್ಮೂಲ ಸಚಿವನಾಗಿ ನಾನು ಮಾಡಿರುವ ಕಾರ್ಯಗಳನ್ನು ಮೆಚ್ಚಿ ಸಿದ್ಧೇಶ್ವರ ಸ್ವಾಮೀಜಿ ಯಶಸ್ವಿ ಸಚಿವ ಎಂದು ಆಶೀರ್ವಾದ ಮಾಡಿದ್ದಾರೆ.  ಇದು ನನಗೆ ನೋಬೆಲ್ ಪ್ರಶಸ್ತಿಗಿಂತಲೂ ಹೆಚ್ಚು ಸಂತೋಷ ತಂದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಡ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನೂ ಕೂಡ ಇದೇ […]

ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ- ಯತ್ನಾಳ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ

ವಿಜಯಪುರ: ಬಿ. ಎಸ್. ಯಡಿಯೂರಪ್ಪ, ಹರಿಹರ ಪೀಠಾಧೀಶರು ಮತ್ತು ತಮ್ಮ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಟೀಕೆಗಳಿಗೆ ಸಚಿವ ನಿರಾಣಿ ಯತ್ನಾಳ ಹೆಸರು ಹೇಳದೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನನ್ನ ಬಗ್ಗೆ, ಸ್ವಾಮೀಜಿ ಬಗ್ಗೆ, ಸರಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತನಾಡುತ್ತಿದ್ದಾರೆ.  ಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದರೂ ಅವರ ಹಾವಭಾವ, ಮಾತುಗಳಲ್ಲಿ ಬಲದಾವಣೆಯಾಗಿಲ್ಲ.  ಯಡಿಯೂರಪ್ಪ, ನಿರಾಣಿ, […]