ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ ರೂ. 50 ಸಾವಿರ ಆರ್ಥಿಕ ನೆರವು ನೀಡಿದ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ ನಾಯಕ

ವಿಜಯಪುರ: ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ ರೂ. 50 ಸಾವಿರ ಆರ್ಥಿಕ ನೆರವು ನೀಡುವ ಮೂಲಕ ಲೋಕಾಯುಕ್ತ ಸಿಪಿಐ ಮಹೇಂದ್ರಕುಮಾರ ನಾಯಕ ಗಮನ ಸೆಳೆದಿದ್ದಾರೆ. 

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದ ವೀರಯೋಧ ದಯಾನಂದ ಪಾಟೀಲ ದೇಶಸೇವೆ ಮಾಡುವಾಗ 12.04.2022 ರಂದು ಹುತಾತ್ಮರಾಗಿದ್ದರು.  ಹೀಗಾಗಿ ಅವರ ಸ್ಮರಣಾರ್ಥ ಲೋಣಿ ಬಿ. ಕೆ. ಗ್ರಾಮದಲ್ಲಿ ಯೋಧನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ.  ಈ ಪುತ್ಥಳಿ ನಿರ್ಮಾಣಕ್ಕೆ ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಆಗಿರುವ ಮಹೇಂದ್ರಕುಮಾರ ನಾಯಕ ವೈಯಕ್ತಿಕವಾಗಿ ರೂ. 50 ಸಾವಿರ ಹಣದ ಚೆಕ್ ನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಲೋಣಿ ಬಿ. ಕೆ. ಗ್ರಾ. ಪಂ. ಸದಸ್ಯರಾದ ಎಸ್. ಕೆ. ಪಾಟೀಲ, ಜಟ್ಟೆಪ್ಪ ಮಳಬಗಿ, ಯುವ ಮುಖಂಡರಾದ ನಾಗನಾಥಗೌಡ ಬಿರಾದಾರ, ಸತೀಶ ಉಟಗಿ, ಪ್ರಕಾಶ ಬಿರಾದಾರ, ಸತೀಶ ಮೋರಟಗಿ, ವಿಕಾಸ ಕದಂ, ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

One Response

Leave a Reply

ಹೊಸ ಪೋಸ್ಟ್‌