ದೆಹಲಿಯಲ್ಲಿ ಸಚಿವ ಗಜೇಂದ್ರಸಿಂಗ್ ಭೇಟಿ ಮಾಡಿದ ಕಾರಜೋಳ- ಕೃಷ್ಣಾ ಐ ತೀರ್ಪು ಗೆಜೆಟ್ ನಲ್ಲಿ ಸೇರಿಸುವ ಕುರಿತು ಚರ್ಚೆ

ನವದೆಹಲಿ: ನವದೆಹಲಿ ಪ್ರವಾಸ ಕೈಗೊಂಡಿರುವ ರಾಜ್ಯ ನೀರಾವರಿ ಸಚಿವ ಗೋವಿಂದ ಕಾರಜೋಳ‌ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ ಅವರನ್ನು ಭೇಟಿ ಮಾಡಿದ್ದಾರೆ.

ಬೆಳಿಗ್ಗೆ ಕೇಂದ್ರ ಸಚಿವರ ನಿವಾಸದಲ್ಲಿ ಶೇಖಾವತ ಅವರನ್ನು ಕಾರಜೋಳ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡುವಂತೆ ಕಾರಜೋಳ ಒತ್ತಾಯಿಸಿದರು.

ಅಲ್ಲದೇ, ಕೃಷ್ಣ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣದ ಐ-ತಿರ್ಪನ್ನು ಕೇಂದ್ರ ಸರಕಾರದ ಗೆಜೆಟ್ ನಲ್ಲಿ ಪ್ರಕಟಿಸುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು.

Leave a Reply

ಹೊಸ ಪೋಸ್ಟ್‌