ವಿಜಯಪುರದಲ್ಲಿ ಶ್ರೀರಾಮ ಫೈನಾನ್ಸ್ ಲಿ. ನೂತನ ವಲಯ ಕಚೇರಿ, ಶಾಖಾ ಕಚೇರಿಗಳ ಉದ್ಘಾಟನೆ

ವಿಜಯಪುರ: ಶ್ರೀರಾಮ ಫೈನಾನ್ಸ್ ಲಿಮಿಟೆಡ್ ನ ನೂತನ ವಲಯ ಕಚೇರಿ ಹಾಗೂ ಶಾಖಾ ಕಚೇರಿಗಳ ಉದ್ಘಾಟನೆ ಸಮಾರಂಭ ನಗರದಲ್ಲಿ ನಡೆಯಿತು.

ಸಾಯಿ ಪಾರ್ಕ್ ನ ಸಮರ್ಥ ನಗರದ ತೋಳಮಟ್ಟಿ ಕಾಂಪ್ಸೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಸಂಸ್ಥೆಯ ಝೋನಲ್ ಬ್ಯೂಸಿನೆಸ್ ಹೆಡ್ ಶ್ರೀಧರ ಮಾಟಂ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಸ್ಥೆ ಗ್ರಾಹಕಸ್ನೇಹಿಯಾಗಿದ್ದು, ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ.  ಸಂಸ್ಥೆಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಶ್ರೀರಾಮ ಫೈನಾನ್ಸ್ ಲಿ. ನೂತನ ವಲಯ ಕಚೇರಿ ಉದ್ಘಾಟನೆ ಬಳಿಕ ಗ್ರುಪ್ ಫೋಟೋ ತೆಗೆಸಿಕೊಂಡ ಸಿಬ್ಬಂದಿ, ಗ್ರಾಹಕರು

ಈ ಕಾರ್ಯಕ್ರಮದಲ್ಲಿ ನಗರದಲ್ಲಿ ಹಲವಾರು ವರ್ಷಗಳಿಂದ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ವಿಜಯಪುರದ ಗ್ರಾಹಕರು ಮತ್ತು ವಾಹನ ವಿತರಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಸ್ಟರ್ ಹೆಡ್ ಉದಯ ಚನ್ನವರ, ಅಧಿಕಾರಿಗಳಾದ ವಿ. ಬಿ. ಧನಶೆಟ್ಟಿ ಕುಮಾರ ಬುಚೆಟ್ಟಿ, ಸಂಸ್ಥೆಯ ವಿಜಯಪುರ ರೀಜನಲ್ ಮ್ಯಾನೇಜರ್ ಉಮೇಶ ಬಿರಾದಾರ, ಸಂದೀಪ ಸುಪಲಿ ಹಾಗೂ ನೂತನ ಶಾಖೆಯ ಮ್ಯಾನೇಜರ್ ಬದ್ರುದ್ದಿನ್ ಖಾಜಿ, ಅಧಿಕಾರಿಗಳು ಮತ್ತು ಗ್ರಾಹಕರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌