ಸಿಂದಗಿ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ್ ಜಯಂತಿ ಆಚರಣೆ

ವಿಜಯಪುರ: ಶ್ರೀ ಮಹಾಯೋಗಿ ವೇಮನ್ ಜಯಂತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಹಸೀಲ್ದಾರಕಚೇರಿಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು. 

ಗ್ರೇಡ್-2 ತಹಸೀಲ್ದಾರ ಪ್ರಕಾಶ ಸಿಂದಗಿ ಶ್ರೀ ಮಹಾಯೋಗಿ ವೇಮನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಿಂದಗಿ ತಾಲೂಕು ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಅಚರಿಸಲಾಯಿತು

ಈ ಕಾರ್ಯಕ್ರಮದಲ್ಲಿ ಬಸವರಾಜ ಸೋಂಪುರ ಉಪನ್ಯಾಸ ನೀಡಿದರು.  ಸಿರಸ್ತೆದಾರ ಸುರೇಶ ಮ್ಯಾಗೇರಿ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಮುಖಂಡರಾದ ಚಂದ್ರಶೇಖರ ದೇವರಡ್ಡಿ, ಸಮಾಜ ಮುಖಂಡರಾದ ರವಿ ಮಂಗಳೂರ, ಬಸವರಾಜ ಕೋಳೂರ, ಮಲಕನಗೌಡ ಪಾಟೀಲ, ಅನಂತರಡ್ಡಿ ದೇವರೆಡ್ಡಿ, ರಾಜೇಂದ್ರರೆಡ್ಡಿ ದೇಸಾಯಿ ಮತ್ತು ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌