ಬಸವನಾಡಿನಲ್ಲಿ ಬಿಜೆಪಿ ವತಿಯಿಂದ ಸ್ಟಿಕ್ಕರ್ ಅಂಟಿಸುವುದು, ಕರಪತ್ರ ಹಂಚಿಕೆಗೆ ಜೆ. ಪಿ. ನಡ್ಡಾ ಚಾಲನೆ

ವಿಜಯಪುರ: ನಗರದ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ್ಲಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಗೋಡೆಗೆ ಸ್ಟಿಕ್ಕರ್ ಅಂಟಿಸುವುದು ಮತ್ತು ಕರಪತ್ರ ಹಂಚಿಕೆ ಕಾರ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಿದರು. ವಿಜಯಪುರ ನಗರದ ವಾರ್ಡ್ ಸಂಖ್ಯೆ 12 ಮತ್ತು 10ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸದಸ್ಯತ್ಯವ ಅಭಿಯಾನಕ್ಕೆ ಜೆ. ಪಿ. ನಡ್ಡಾ ಚಾಲನೆ ನೀಡಿದರು  ವೈದ್ಯ ಡಾ. ರಾಚಪ್ಪನವರ ಅವರ ಮನೆಗೆ ಕಂಪೌಂಡ್ ಗೋಡೆಗೆ ಬಿಜೆಪಿ ಚಿನ್ಹೆಯಾದ ಕಮನಲದ ಸ್ಟಿಕ್ಕರ್ ಅಂಟಿಸಿದರು. […]

ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂ ವಿವಿದೋದ್ದೇಶ ಸಹಕಾರಿ ಸಂಘಗಳ ಸಭೆ

ವಿಜಯಪುರ: ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂt ವಿವಿಧೋದ್ದೇಶ ಸಹಕಾರಿ ಸಂಘಗಳ ಸಭೆ ನಗರದಲ್ಲಿ ನಡೆಯಿತು. ವಿಜಯಪುರದ ಜಿಲ್ಲಾ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಭೆಯನ್ನು ಸಹಕಾರಿ ಭಾರತಿ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎಂ. ಜಿ. ಪಾಟೀಲ, ಭಾಸ್ಕರ ಹೆಗಡೆ, ಗುರುನಾಥ ಜಾನತಿಕರ, ಮಾತನಾಡಿದರು.  ಈ ಸಭೆಯಲ್ಲಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಜಿಲ್ಲಾಧ್ಯಕ್ಷ ಡಾ. ಆರ್. ಆರ್.  ನಾಯ್ಕ, ವಿಜಯಪುರ ಡಿಸಿಸಿ ಬ್ಯಾಂಕಿನ […]

ಶ್ರೀ ಬಿ. ಎಂ. ಪಾಟೀಲ U-16 ಕ್ರಿಕೆಟ್ ಟೂರ್ನಿ- ವಿಜಯಪುರ ಟೈಗರ್ಸ್ ಚಾಂಪಿಯನ್ಸ್- ಪ್ರಶಸ್ತಿ ವಿತರಿಸಿದ ಅರ್ಜುನ ರಾಠೋಡ

ವಿಜಯಪುರ: ನಗರದ ಬಿ. ಎಲ್. ಡಿ. ಕ್ರೀಡಾಂಗಣದಲ್ಲಿ ನಡೆದ 16 ವರ್ಷದೊಳಗಿನವರ ಶ್ರೀ. ಬಿ. ಎಂ. ಪಾಟೀಲ ಕ್ರಿಕೆಟ್ ಟ್ರೋಫಿಯನ್ನು ವಿಜಯಪುರ ಟೈಗರ್ಸ್ ತಂಡ ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಈ ತಂಡ ವಿಜಯಪುರ ಚಾಂಪಿಯನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.  ವಿಜೇತ ತಂಡದ ಪರ ಬಾಬಾಗೌಡ ಪಾಟೀಲ ಮತ್ತು ರನ್ನರ್ ಅಪ್ ತಂಡದ ಪರ ಅರ್ಪಿತ ನಾಗಾನಂದ ಪ್ರಶಸ್ತಿ ಸ್ವೀಕರಿಸಿದರು. ಈ ಪಂದ್ಯದಲ್ಲಿ ರಾಹುಲ ಲಮಾಣಿ ಪ್ರಥಮ ಪಂದ್ಯ ಪುರುಷ ಪ್ರಶಸ್ತಿ ಪಡೆದರೆ, ರಿಯಾಜ ಇನಾಮದಾರ ದ್ವಿತೀಯ […]

ನಾಗಠಾಣ ಮತಕ್ಷೇತ್ರದ ವಾ. ಸಂ. 12ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸದಸ್ಯತ್ಯವ ಅಭಿಯಾನಕ್ಕೆ ಜೆ. ಪಿ. ನಡ್ಡಾ ಚಾಲನೆ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಿಜಯಪುರ ನಗರದ ವಾರ್ಡ ಸಂಖ್ಯೆ 12ರಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಎಂಜಿನಿಯಿರಂಗ್ ಕಾಲೇಜಿನ ಎದುರ ಇರುವ ಮೈದಾನದಲ್ಲಿ ವೇದಿಕೆಯಲ್ಲಿ ಸಂಸದ ರಮೇಶ ಜಿಗಜಿಮಗಿ ಅವರ ಮೊಬೈಲಿನಿಂದ ಮಿಸ್ಡ್‌ಕಾಲ್ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಗೋವಿಂದ ಕಾರಜೋಳ ಮತ್ತು […]

ಬಸವ ನಾಡಿನಲ್ಲಿ ಜೆ. ಪಿ. ನಡ್ಡಾ ಪ್ರವಾಸ- ಜ್ಞಾನಯೋಗಾಶ್ರಮಕ್ಕೆ ಭೇಟಿ- ಲಿಂ. ಸ್ವಾಮಿ ಸಿದ್ಧೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭರ್ಜರಿಯಾಗಿಯೇ ಕಮಲ ಪಾಳೆಯದಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ.  ದೆಹಲಿಯಿಂದ ಕಲಬುರಗಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ನಂತರ ಕಲಬುರಗಿಯಿಂದ ವಿಜಯಪುರಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು.  ಸೈನಿಕ ಶಾಲೆಯ ಅವರಣದಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ನಡ್ಡಾ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ವಿಜಯಪುರ ಸೈನಿಕ ಶಾಲೆಯಿಂದ ನೇರವಾಗಿ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಅವರು, ಪ್ರಣವ ಮಂಟಪಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಹಾಕಿದರು.  […]

ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ‌ ಸೋಮಜಾಳ ನಿಧನ- ಎಚ್ಡಿಕೆ ಸಂತಾಪ- ಮುದ್ದೇಬಿಹಾಳ ಕಾರ್ಯಕ್ರಮ ನಾಳೆಗೆ ಮುಂದೂಡಿಕೆ

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡ ಸಂದರ್ಭದಲ್ಲಿಯೇ ಪಕ್ಷಕ್ಕೆ ಆಘಾತ ಎದುರಾಗಿದೆ. ಸಿಂದಗಿ ಮತಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ(54) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಸಿಎಂ‌ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದರು. ಅಲ್ಲದೇ, ನಂತರ ನಾಗಠಾಣ ಮತಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಶಿವಾನಂದ ಪಾಟೀಲ ಸೋಮಜಾಳ ಭಾಗಿಯಾಗಿದ್ದರು. ಸಂಜೆ […]

ಸ್ವಸಾಮರ್ಥ್ಯದಿಂದ ರಾಹುಲ್ ದ್ರಾವಿಡ್ ಪುತ್ರನ ನೇತೃತ್ವದ ಕರ್ನಾಟಕ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಸವ ನಾಡಿನ ಸಮರ್ಥ ಕುಲಕರ್ಣಿ

ಮಹೇಶ ವಿ. ಶಟಗಾರ, ವಿಜಯಪುರ: ಪ್ರತಿಭೆಯಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಸವನಾಡಿನ ಬಾಲಕ ಸಾದಿಸಿ ತೋರಿಸಿದ್ದಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಮತ್ತು ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸಾರಥ್ಯದ ಕರ್ನಾಟಕದ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಈ ಬಾಲಕ ಕ್ರಿಕೆಟ್ ನಲ್ಲಿ ತಂದೆಗಿಂತಲೂ ಹೆಚ್ಚಿನ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ವಿಜಯಪುರ ನಗರ ಮೂಲದ ಸಮರ್ಥ ವಿನಯ ಕುಲಕರ್ಣಿ ಈಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಲೂಲ್ ನಲ್ಲಿ […]