ಬಸವನಾಡಿನಲ್ಲಿ ಬಿಜೆಪಿ ವತಿಯಿಂದ ಸ್ಟಿಕ್ಕರ್ ಅಂಟಿಸುವುದು, ಕರಪತ್ರ ಹಂಚಿಕೆಗೆ ಜೆ. ಪಿ. ನಡ್ಡಾ ಚಾಲನೆ

ವಿಜಯಪುರ: ನಗರದ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ್ಲಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಗೋಡೆಗೆ ಸ್ಟಿಕ್ಕರ್ ಅಂಟಿಸುವುದು ಮತ್ತು ಕರಪತ್ರ ಹಂಚಿಕೆ ಕಾರ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಿದರು.

ವಿಜಯಪುರ ನಗರದ ವಾರ್ಡ್ ಸಂಖ್ಯೆ 12 ಮತ್ತು 10ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸದಸ್ಯತ್ಯವ ಅಭಿಯಾನಕ್ಕೆ ಜೆ. ಪಿ. ನಡ್ಡಾ ಚಾಲನೆ ನೀಡಿದರು  ವೈದ್ಯ ಡಾ. ರಾಚಪ್ಪನವರ ಅವರ ಮನೆಗೆ ಕಂಪೌಂಡ್ ಗೋಡೆಗೆ ಬಿಜೆಪಿ ಚಿನ್ಹೆಯಾದ ಕಮನಲದ ಸ್ಟಿಕ್ಕರ್ ಅಂಟಿಸಿದರು.

ವಿಜಯಪುರ ನಗರದ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 12ರಲ್ಲಿ ಗೋಡೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಜೆ. ಪಿ. ನಡ್ಡಾ ಚಾಲನೆ ನೀಡಿದರು

ನಂತರ ಮನೆ ಮನೆಗೆ ಕರಪತ್ರ ಹಂಚಿಕೆಗೆ ಆಗಮಿಸಿದ ನಡ್ಡಾ ಅವರಿಗೆ ಮಹಿಳೆಯರು ಆರತಿ ಬೆಳಗಿ ತಿಲಕ ಹಚ್ಚಿ ಸ್ವಾಗತ ಕೋರಿದರು.  ಈ ಸಂದರ್ಭದಲ್ಲಿ ಜೆ. ಪಿ. ನಡ್ಡಾ ಅವರು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಸಹೋದರಿ ಶೀಲವಂತ ಕುಟುಂಬಸ್ಥರಿಗೆ ಕರಪತ್ರ ಹಂಚಿ ಬಿಜೆಪಿ ಪರ ಪ್ರಚಾರ ನಡೆಸಿದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಬಿಜೆಪಿ ಮುಖಂಡರಾದ ಗೋಪಾಲ ಗೋವಿಂದ ಕಾರಜೋಳ, ಉಮೇಶ ಗೋವಿಂದ ಕಾರಜೋಳ, ಮಲ್ಲಿಕಾರ್ಜುನ ಜೋಗೂರ, ಈರಣ್ಣ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌