ಶ್ರೀ ಬಿ. ಎಂ. ಪಾಟೀಲ U-16 ಕ್ರಿಕೆಟ್ ಟೂರ್ನಿ- ವಿಜಯಪುರ ಟೈಗರ್ಸ್ ಚಾಂಪಿಯನ್ಸ್- ಪ್ರಶಸ್ತಿ ವಿತರಿಸಿದ ಅರ್ಜುನ ರಾಠೋಡ

ವಿಜಯಪುರ: ನಗರದ ಬಿ. ಎಲ್. ಡಿ. ಕ್ರೀಡಾಂಗಣದಲ್ಲಿ ನಡೆದ 16 ವರ್ಷದೊಳಗಿನವರ ಶ್ರೀ. ಬಿ. ಎಂ. ಪಾಟೀಲ ಕ್ರಿಕೆಟ್ ಟ್ರೋಫಿಯನ್ನು ವಿಜಯಪುರ ಟೈಗರ್ಸ್ ತಂಡ ಪಡೆದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಈ ತಂಡ ವಿಜಯಪುರ ಚಾಂಪಿಯನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.  ವಿಜೇತ ತಂಡದ ಪರ ಬಾಬಾಗೌಡ ಪಾಟೀಲ ಮತ್ತು ರನ್ನರ್ ಅಪ್ ತಂಡದ ಪರ ಅರ್ಪಿತ ನಾಗಾನಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ವಿಜೇತ ತಂಡಕ್ಕೆ ಅರ್ಜುನ ಹೀರು ರಾಠೋಡ ಬರುಮಾನ ವಿತರಿಸಿದರು

ಈ ಪಂದ್ಯದಲ್ಲಿ ರಾಹುಲ ಲಮಾಣಿ ಪ್ರಥಮ ಪಂದ್ಯ ಪುರುಷ ಪ್ರಶಸ್ತಿ ಪಡೆದರೆ, ರಿಯಾಜ ಇನಾಮದಾರ ದ್ವಿತೀಯ ಮತ್ತು ಜೈದ್ ಜಮಾದಾರ ತೃತೀಯ ಪಂದ್ಯ ಪುರುಷ ಪ್ರಶಸ್ತಿ ಪಡೆದರು.  ಓಂಕಾರ ಭಂಡಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ ಪ್ರಶಸ್ತಿ ಪ್ರಧಾನ ಮಾಡಿದರು.  ಈ ಸಂದರ್ಭದಲ್ಲಿ ಕ್ರಿಕೆಟ್ ತರಬೇತುದಾರ ಪ್ರಶಾಂತ ಹಜೇರಿ, ಮುಖಂಡರಾದ ನಿಂಗು ಬೆಳ್ಳುಬ್ಬಿ, ಪಾಂಡು, ವಿಜಯ ಭಂಡಾರಿ, ಪರಶುರಾಮ ರಾಠೋಡ, ಮುತ್ತಣ್ಣ ಮುಂತಾದವರು ಉಪಸ್ಥಿತರಿದ್ದರು.  ಪರುಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌